ಶಿವಮೊಗ್ಗ ಜಿಲ್ಲಾಧಿಕಾರಿ ಡಾ ಆರ್ ಸೆಲ್ವಮಣಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ ಕೆ ರವರ ನೇತೃತ್ವದಲ್ಲಿ ಮತ್ತು ಶಿವಮೊಗ್ಗ ಸೈಕಲ್ ಕ್ಲಬ್ ಸಂಯೋಜನೆಯಲ್ಲಿ 19ರಂದು ಬೆಳಿಗ್ಗೆ 7 ಗಂಟೆಗೆ ಜನ ಜಾಗೃತಿ ಜಾಥಾ ಚಾಲನೆ ನೀಡಿದರು

ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ , ಹೆಚ್ಚುವರಿ ವರಿಷ್ಠಾಧಿಕಾರಿ ಅನಿಲ್ ಕುಮಾರ್ ರೆಡ್ಡಿ ಮತ್ತು ಜಿಲ್ಲಾ ಪಂಚಾಯಿತ್ ಚುನಾವಣಾ ಅರಿವು ವಿಭಾಗದ ನವೀದ್ ಅಹ್ಮದ್ ಪರ್ವೀಜ್ ಮತ್ತು DySP ಬಾಲರಾಜ್ ಸುರೇಶ್, ಗಜಾನನ , ವೃತ್ತ ನಿರೀಕ್ಷಕ ಆಂಜನ್ ಕುಮಾರ್, ಪಿ ಎಸ್ ಐ ಶೈಲಜ ಹಾಗೂ ಇತರೆ ಹಲವಾರು ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್ ನ ಎಲ್ಲ ಸದಸ್ಯರು ಸಾರ್ವಜನಿಕರು ಭಾಗವಹಿಸಿದ್ದರು.

ನೈತಿಕ ಮತ್ತು ಕಡ್ಡಾಯ ಮತದಾನ ಮಾಡಲು ಪ್ರೇರೇಪಿಸಲಾಯಿತು.ಮತದಾರರ ಪಟ್ಟಿಯಲ್ಲಿ VHA ಮುಖೇನ Voter Id ಪರಿಶೀಲಿಸಲು ಎಂದು ತಿಳಿಸಲಾಯಿತು.ಭಾಗವಹಿಸಿದ್ದ ಎಲ್ಲರಿಗೂ ಟಿ ಶರ್ಟ್ ನೀಡಿದರು.ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದರು.

ವರದಿ ಪ್ರಜಾ ಶಕ್ತಿ…