ವಿನ್ ಲೈಫ್: ಆರೋಗ್ಯವಂತ ದೇಹ ಆರೋಗ್ಯವಂತ ಮನಸ್ಸು-ಡಾ.ಪೃಥ್ವಿ…

ವಿನ್ ಲೈಫ್ ವತಿಯಿಂದ ಇಂದು ಜ್ಯುವೆಲ್ ರಾಕ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.ವಿನ್ ಲೈಫ್ ಮೆಟ್ರೋ ಆಸ್ಪತ್ರೆ ಹಾಗೂ ಮಣಿಪಾಲ್ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ತುರ್ತು ಜೀವ ರಕ್ಷಕ ತರಬೇತಿ ಮತ್ತು ಕಾರ್ಯಗಾರ,(CPR) ದೈನಂದಿನ ಬದುಕಿನಲ್ಲಿ ಒತ್ತಡ ನಿರ್ವಹಣೆ ಮಧುಮೇಹ@360°(Diabetes@360°) ಈ ವಿಷಯಗಳ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಏಪ್ರಿಲ್ 2ರ ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2ರವರೆಗೆ ಕುವೆಂಪುರಂಗ ಮಂದಿರದಲ್ಲಿ ಆರೋಗ್ಯ ಉತ್ಸವ ಜನ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಡಾ.ಪೃಥ್ವಿ ತಿಳಿಸಿದರು.

ಈ ಸಮಾವೇಶದಲ್ಲಿ ಆರೋಗ್ಯ ಕುರಿತು ಪ್ರಾಯೋಗಿಕ ತರಬೇತಿ ಕಾರ್ಯಗಾರ ಯೋಗ ವಸ್ತು ಪ್ರದರ್ಶನ ಕಿರು ನಾಟಕ ಪ್ರದರ್ಶನ ಸಮಾಲೋಚನೆ ಹಾಗೂ ಉಪನ್ಯಾಸವನ್ನು ಏರ್ಪಡಿಸಲಾಗಿದೆ ಎಲ್ಲರೂ ಈ ಆರೋಗ್ಯ ಉತ್ಸವದ ಸಮಾವೇಶದಲ್ಲಿ ಭಾಗವಹಿಸಿ ಹೆಚ್ಚಿನ ಅರಿವು ಪಡೆದುಕೊಳ್ಳಬೇಕಾಗಿ ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ವಿನ್ ಲೈಫ್ ಮ್ಯಾನೇಜಿಂಗ್ ಟ್ರಸ್ಟ್ ಗಳಾದ ಡಾಕ್ಟರ್ ಪೃಥ್ವಿ ಬಿ ಸಿ ಮತ್ತು ನಿರ್ದೇಶಕರುಗಳಾದ ಡಾಕ್ಟರ್ ಶಂಕರ್ ಡಾ. ವಿಜಯ್ ಕುಮಾರ್ ಶ್ರೀ ರೆಹ್ಮತ್ ಹಾಗೂ ಶ್ರೀ ಬದ್ರಿನಾಥ್ ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…