ಜಿಲ್ಲಾಡಳಿತ ಮತ್ತು ಪಾಲಿಕೆಯ ಸ್ವೀಪ್ ಸಮಿತಿಯ ವತಿಯಿಂದ ಮತದಾನ ಜಾಗೃತಿಗಾಗಿ ಇಂದು ಸೈಕಲ್ ಜಾಥಾ ಕಾರ್ಯಕ್ರಮ ನಡೆಯಿತು.

ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಕೋಟೆ ರಸ್ತೆ, ಬೆಕ್ಕಿನಕಲ್ಮಠ, ಬಿ.ಹೆಚ್.ರಸ್ತೆ, ಶಿವಪ್ಪ ನಾಯಕ ಸರ್ಕಲ್, ನೆಹರೂ ರಸ್ತೆ, ಗೋಪಿ ವೃತ್ತ,ದಿಂದ ಅಂಬೇಡ್ಕರ್ ಭವನ ತಲುಪಿದೆ.

ಇಂದು ಬೆಳಿಗ್ಗೆ 7-30 ಕ್ಕೆ ನಡೆದ ಜಾಥಾಕ್ಕೆ ಪಾಲಿಕೆ ನಲ್ಮ್ ಅಧಿಕಾರಿ ಅನುಪಮ ಹಸಿರು ನಿಶಾನೆ ತೋರಿದರು.ನೂರಾರು ಜನ ಈ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಸುಪ್ರಿಯಾ ರತ್ನಾಕರ್, ಲೋಕೇಶ್, ಗೀತಾ, ರೇಣು ಆರಿಫ್ ಹಾಗೂ ಸೈಕಲ್ ಕ್ಲಬ್ ನ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸದಸ್ಯರು ಭಾಗಿಯಾಗಿದ್ದರು.

ವರದಿ ಪ್ರಜಾ ಶಕ್ತಿ…