ಶಿವಮೊಗ್ಗದ ಜನರ ಬಹುದಿನಗಳ ಆಸೆ ಹಾಗೂ ಪ್ರಮುಖ ನಾಯಕರ ಇಚ್ಛೆಯಂತೆ 2016 ನೇ ಇಸವಿಯಿಂದ ಸತತ ಪ್ರಯತ್ನದಿಂದ ಇದ್ದ ಕಾನೂನು ತೊಡಕುಗಳನ್ನು ನಿವಾರಿಸಿ ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಈಗ ಕಾಲ ಕೂಡಿ ಬಂದಿದ್ದು. ಈ ಸಂದರ್ಭದಲ್ಲಿ ಇದಕ್ಕೆ ಸಹಕರಿಸಿದ ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರಿಗೆ, ಸಂಸದರಾದ ಬಿ ವೆ ರಾಘವೇಂದ್ರ, ರುದ್ರೇಗೌಡರು, ಮಹಾನಗರ ಪಾಲಿಕೆ ಎಲ್ಲ ಹಿಂದಿನ ಮಹಾಪೌರರು ಉಪ ಮಹಾಪೌರರು ಹಾಗೂ ಪಾಲಿಕೆ ಸದಸ್ಯರು ಗಳಿಗೆ ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ಅಭಿನಂದನೆಗಳನ್ನು ಸಲ್ಲಿಸಿದರು

ಶನಿವಾರ ಬೆಳಿಗ್ಗೆ 10.30 ಬಸವೇಶ್ವರ ವೃತ್ತದಲ್ಲಿ ಪುತ್ಥಳಿ ಅನಾವರಣಗೊಳಿಸಿ ಕುವೆಂಪು ರಂಗಮಂದಿರದಲ್ಲಿ ಸರಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರಲ್ಲೂ ಮನೆ ಮಾಡಿದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ