ಶಿವಮೊಗ್ಗ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಧ್ವಜಾರೋಹಣವನ್ನು ನಡೆಸಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತರಾದ ಗಾರ ಶ್ರೀನಿವಾಸ್ ರವರು ಕರವೇ ಯುವ ಸೇನೆ ಕನ್ನಡಪರ ಹೊರಟಗಳಲ್ಲಿ ಮುಂಚೂಣಿಯಲ್ಲಿದ್ದು ಇನ್ನು ಹೆಚ್ಚು ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಕರವೇ ಕಿರಣ್ ರವರು ಕರವೇ ಯುವ ಸೇನೆ ಸಂಘಟನೆ ಎಂದಿಗೂ ಕನ್ನಡಿಗರ ಒಳಿತಿಗಾಗಿ ದುಡಿಯುವ ಸಂಘಟನೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಸಾಧನೆಗೈದ ಹಲವರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಣ್ಣು ಹಂಪಲುಗಳನ್ನು ವಿತರಿಸಿದರು

ಕರವೇ ಯುವ ಸೇನೆಯ ರಾಮು ಗಣೇಶ ವಿಜಯ್ ಆಟೋಭಕ್ಷಿ ಪ್ರಪಂಚಂದ್ರ ಶಫಿವುಲ್ಲಾ ಕವಿತಾ ಲಕ್ಷ್ಮಿ ಪದ್ಮ ಮಾಲತಿ ಮುಂತಾದವರು ಉಪಸ್ಥಿತರಿದ್ದರು