ಕೆ.ಪಿ.ಸಿ.ಸಿ. ರಾಜ್ಯ ಸಂಯೋಜಕರು ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ. ಪ್ರಧಾನ ಕಾರ್ಯ ದರ್ಶಿ ಮತ್ತು ಆಡಳಿತ ಉಸ್ತುವಾರಿ ಗಳಾದ
ಶ್ರೀ ಸಿ.ಎಸ್. ಚಂದ್ರಭೂಪಾಲ ಇವರನ್ನು
ಕರ್ನಾಟಕ ರಾಜ್ಯ”ಅಹಿಂದ” ಸಂಘಟನೆಯ
ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಅಧ್ಯಕ್ಷರನ್ನಾಗಿ
ಕರ್ನಾಟಕ ರಾಜ್ಯ”ಅಹಿಂದ” ಸಂಘಟನೆಯ
ರಾಜ್ಯಾಧ್ಯಕ್ಷರಾದ ಶ್ರೀ ಪ್ರಭುಲಿಂಗದೊಡ್ಡಿನಿ
ರವರು ನೇಮಕ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿರುವ ಎಲ್ಲಾ ಅಹಿಂದ ಸಮುದಾಯದ ಬಂಧುಗಳ ಜೊತೆ ಜೊತೆಗೆ
ಅವರ ಸಹಕಾರ ಮತ್ತು ಬೆಂಬಲದೊಂದಿಗೆ
ನನಗೆ ವಹಿಸಿರುವ ಜವಾಬ್ದಾರಿ‌ಯ ಕರ್ತವ್ಯ ವನ್ನು ಯಶಸ್ವಿಯಾಗಿ ನಿರ್ವಹಿಸಿ”ಅಹಿಂದ” ಸಂಘಟನೆಗೆ ಚಾಲನೆನೀಡಿ ಶಿವಮೊಗ್ಗ ಜಿಲ್ಲೆ ಯಲ್ಲಿ ಸದೃಢ – ಬಲಿಷ್ಠ‌ತೆಯ ಸಂಘಟನೆಗೆ
ಶ್ರಮಿಸುತ್ತೇನೆ ಎಂದು ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ
ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಮಾಡುವು
ದರ ಮೂಲಕ ತಾಲೂಕು ಮಟ್ಟದ ಅಹಿಂದ ಸಮಾಜದ ಸಭೆಗಳನ್ನು ನಡೆಸಿ. ಸಂಘಟನೆ
ಕಾರ್ಯದಲ್ಲಿ ಸಕ್ರಿಯವಾಗಿರುವ ಪ್ರಮುಖ ವ್ಯಕ್ತಿಗೆ ತಾಲೂಕು ಅಹಿಂದ ಸಂಘಟನೆಯ ಅಧ್ಯಕ್ಷ ಸ್ಥಾನವನ್ನು ನೀಡಲಾಗುತ್ತದೆ ಮತ್ತು
ಅಹಿಂದ ಸಮುದಾಯದ ಎಲ್ಲಾಜಾತಿಗಳಿಗೆ
ಪ್ರಾತಿನಿಧ್ಯ ದೊರಕುವಂತೆ ಜಿಲ್ಲಾ ಸಮಿತಿಗೆ
ಪದಾಧಿಕಾರಿಗಳನ್ನು/ಸದಸ್ಯರನ್ನು ನೇಮಕ ಮಾಡಲಾಗುತ್ತದೆ.ಜೊತೆಗೆ ಮಹಿಳಾ ಮತ್ತು ಯುವಕ ವಿಭಾಗಗಳನ್ನು ರಚನೆಮಾಡಿ ಆ ಸಮಿತಿಗಳಿಗೆ ಅಧ್ಯಕ್ಷ – ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ಸಿ.ಎಸ್ ಚಂದ್ರಭೂಪಾಲ ರವರು ತಿಳಿಸಿದ್ದಾರೆ.

ವರದಿ ಪ್ರಜಾಶಕ್ತಿ…