ಕುಡ್ಲ ನ್ಯೂಸ್…

ಬಂಟರ ಯಾನೆ ನಾಡವರ ಮಾತೃ ಸಂಘದ ಶತಮಾನೋತ್ಸವ ಕನ್ವೆನ್ಷನ್ ಸೆಂಟರ್ ನಿರ್ಮಾಣ ಸಮಿತಿಯ ಚೇರ್ಮನಾಗಿ ಎಂ.ಆರ್.ಜಿ.ಗ್ರೂಪಿನ ಚೇರ್ಮನ್ ಕೆ.ಪ್ರಕಾಶ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಂಟರ ಯಾನೆ ನಾಡವರ ಮಾತೃ ಸಂಘದ ಶತಮಾನೋತ್ಸವ ಕನ್ವೆನ್ಷನ್ ಸೆಂಟರ್ ನಿರ್ಮಾಣ ಸಮಿತಿಯ ಚೇರ್ಮನಾಗಿ ಎಂ.ಆರ್.ಜಿ.ಗ್ರೂಪಿನ ಚೇರ್ಮನ್ ಕೆ.ಪ್ರಕಾಶ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದು, ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ಅವಿರೋಧವಾಗಿ ಆಯ್ಕೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಭವನ ನಿರ್ಮಾಣದ ಕಾರ್ಯವನ್ನು ತ್ಚರಿತವಾಗಿ ಕೈಗೆತ್ತಿಕೊಂಡು ನಿರ್ವಹಿಸಲು ಪ್ರಕಾಶ್ ಶೆಟ್ಟಿ ಅವರು ಅತ್ಯಂತ ಸಮರ್ಥರು ಎಂದು ಭಾಗವಹಿಸಿದ ಗಣ್ಯರ ಒಕ್ಕೊರಲ ಅಭಿಪ್ರಾಯ ಮಂಡಿಸಿದ ಹಿನ್ನೆಲೆಯಲ್ಲಿ ಈ ಆಯ್ಕೆ ನಡೆದಿದೆ.

ಬಂಟರ ಯಾನೆ ನಾಡವರ ಮಾತೃ ಸಂಘ ಜಾಗತಿಕ ಮಟ್ಟದ ವ್ಯಾಪ್ತಿಯನ್ನು ಹೊಂದಿದ ಸಂಘಟನೆಯಾಗಿದ್ದು ಸಮುದಾಯದ ಅಭಿವೃದ್ಧಿಗೆ ದುಡಿಯುತ್ತಿದೆ. ಪ್ರಕಾಶ್ ಶೆಟ್ಟಿ ಅವರ ಆಯ್ಕೆಯಿಂದ ಸಂಘಕ್ಕೆ ಹೊಸ ಶಕ್ತಿ ಲಭಿಸಿದಂತಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು.

ವರದಿ ಪ್ರಜಾಶಕ್ತಿ