ಶಿವಮೊಗ್ಗ :- ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ, ತಾಲ್ಲೂಕು, ಹೋಬಳಿ ಸಮಿತಿಗಳ ನೇತೃತ್ವದಲ್ಲಿ ಸೊರಬ ತಾಲ್ಲೂಕು ಕೋಟಿಪುರದಲ್ಲಿರುವ ಎವರಾನ್ ಇಂಟರ್ ನ್ಯಾಶನಲ್ ರೆಸಿಡೆನ್ಸಿ ಸ್ಕೂಲ್ ಸಹಯೋಗದಲ್ಲಿ ಜನವರಿ ೨೬ ರಂದು ಒಂದು ದಿನದ ಶಿವಮೊಗ್ಗ ಜಿಲ್ಲಾ ೫ ನೆಯ ಜಾನಪದ ಸಮ್ಮೇಳನ ಏರ್ಪಡಿಸಲಾಗುವುದು ಎಂದು ಕಜಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದ್ದಾರೆ.
ಒಂದೇ ವೇದಿಕೆಯಲ್ಲಿ ಜಿಲ್ಲೆಯ ಹಲವು ಜನಪದ ಕಲೆಗಳ ಅನಾವರಣ ಆಗಲಿದೆ. ಜನಪದ ಕಲಾವಿದರಲ್ಲಿ ವಿಶ್ವಾಸ ತುಂಬುವ ಪ್ರಯತ್ನ ಈ ಸಮ್ಮೇಳನದ ಹಿಂದಿನ ಆಶಯವಾಗಿದೆ ಎಂದು ವಿವರಿಸಿದ್ದಾರೆ.


*ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ನಿವಾಸಿ, ಲಾವಣಿ ಕಲಾವಿದ ಬೇಗೂರು ಶಿವಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನ ಯಶಸ್ವಿಯಾಗಿ ನಡೆಯಲು ಆನವಟ್ಟಿಯ ಕಾರ್ತಿಕ್ ಸಾಹುಕಾರ್, ಖಲಂದರ್ ಸಾಬ್, ಬಸವನಗೌಡರು ಸೇರಿದಂತೆ ಅವರ ತಂಡ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ ಕಜಾಪ ಮತ್ತು ಕಸಾಪ, ಕಸಾಸಾಂ ವೇದಿಕೆ ಪದಾಧಿಕಾರಿಗಳು, ಸದಸ್ಯರು ಗಣರಾಜ್ಯೀತ್ಸವ ಮುಗಿಸಿಕೊಂಡು ಭಾಗವಹಿಸಲು ಡಿ. ಮಂಜುನಾಥ ವಿನಂತಿಸಿದ್ದಾರೆ.