ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಕಚೇರಿ (ನವದೆಹಲಿ) ಯಲ್ಲಿ ಸ್ಥಾಪಿತವಾದ “ಡೆಮೋಕ್ರಟಿಕ್ ಜರ್ನಲಿಸ್ಟ್ ಯೂನಿಯನ್” ಸಂಸ್ಥೆ ಯು ಕರ್ನಾಟಕ ರಾಜ್ಯದಲ್ಲಿ ತನ್ನದೇ ಛಾಪು ಮೂಡಲು ಸಜ್ಜಾಗಿದೆ.

ಈ ಸಂಸ್ಥೆಯು 2023 ನೇ ಅಕ್ಟೊಬರ್ 18ರಂದು ನೆರೆ ರಾಜ್ಯದ ತೆಲಂಗಣದ ಹೈದರಾಬಾದ್ ನಲ್ಲಿ ಸ್ಥಾಪಿತವಾಗಿದ್ದು ನವದೆಹಲಿಯಲ್ಲಿ ಕೇಂದ್ರ ಕಚೇರಿ ಮಾಡಲಾಗಿದೆ.

ಕರ್ನಾಟಕದ ರಾಜ್ಯ ಕಚೇರಿಯಾಗಿ ಬೆಂಗಳೂರಿನಲ್ಲಿ ಸಜ್ಜಗುತ್ತಿದ್ದು ಖಾಸಗಿ ಮಾಧ್ಯಮ ವರದಿಗಾರರು ಲಕ್ಷ್ಮೀಪತಿ ಮತ್ತು ಪಂಚಾಯತ್ ನ್ಯೂಸ್ ನ ಮಾಲೀಕರದ ಮಲ್ಲೇಶ್ ರವರ ನೇತೃತ್ವದಲ್ಲಿ ದುಂಡು ಮೆಜಿನ ಸಭೆ ಮಾಡಲಾಯಿತು.

ಸಭೆಯಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಯ ವರದಿಗಾರರು ಮತ್ತು ಡೆಮೋಕ್ರ್ಯಾಟಿಕ್ ಜರ್ನಲಿಸ್ಟ್ ಯೂನಿಯನ್ ನ ರಾಷ್ಟ್ರೀಯ ಸಂಯೋಜಕರು ಹಾಗೂ ತೆಲಂಗಾಣದ ರಾಜ್ಯದ ಹೆಸರಾಂತ ಖಾಸಗಿ ಸುದ್ದಿ ವಾಹಿನಿಯ ಮಾಲೀಕರಾದ ಲಕ್ಷ್ಮಿ ನರಸಿಂಹ ಪಾಲ್ಗೊಂಡಿದ್ದು ಸಭೆಯನ್ನು ಯಶಸ್ವಿ ಗೊಳಿಸಿದ್ದಾರೆ.

ವರದಿ ಸಂತೋಷ್ ರಾಮ್