ಮಂಡಗದ್ದೆ ಕ್ಲಸ್ಟರ್ ಕೇಂದ್ರದಲ್ಲಿ ವರ್ಗಾವಣೆಗೊಂಡ ಶಿಕ್ಷಕರಿಗೆ ಹೃದಯಸ್ಪರ್ಶಿ ಸೇವಾಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮ ದ ಉದ್ಘಾಟನೆಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ.ಗಣೇಶ್ ವೈ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯಂತಿನಾಗೇಶ್ ರವರು ನೆರವೇರಿಸಿದರು.ಸರ್ವರನ್ನು ಮಲ್ಲೇಶ್ ರವರು ಸ್ವಾಗತಿಸಿದರು.ಆರತಿ ಶಿಕ್ಷಕಿಯವರು ನಿರೂಪಿಸಿದರು.ಶಿಕ್ಷಕರ ಸಂಘದ ನಿರ್ದೇಶಕರುಗಳಾದ ಮಹಾಬಲೇಶ್ವರ ಹೆಗಡೆ ಮೂಕಾಂಬಿಕಾ ಎಮ್.ಸಿ ಮಂ ಜುನಾಥ ಆನಂದ್‌ಕುಮಾರ್ ಎನ್ ಆರ್ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕರಾದ ಜ್ಯೋತಿ ರವರು ವರ್ಗಾವಣೆಗೊಂಡ ಶಿಕ್ಷಕರಿಗೆ ಅಭಿನಂದಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಣೇಶ್ ರವರು ಶಿಕ್ಷಕರು ಮಾಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸುವ ಪದ್ದತಿ ಒಳ್ಳೆಯದು.ಇದು ಹೀಗೆ ಮುಂದುವರೆಯಲಿ.ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವ್ರುತ್ತರಾಗಬೇಕು ಎಂದು ಹೇಳಿ ಶುಭಕೋರಿದರು.ಜಯಂತಿ ರವರು ಸಹ ಶಿಕ್ಷರರ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು.ಮಹಾಬಲೇಶ್ವರ ಹೆಗಡೆಯವರು ಶಿಕ್ಷಕರ ಸೇವೆಯನ್ನು ಗುರುತಿಸಿ ಅಭಿನಂದಿಸುವುದರಿಂದ ಅವರಲ್ಲಿ ಸ್ಪೂರ್ತಿ ಉತ್ಸಾಹ ತುಂಬಿದಂತಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ದ ರೂವಾರಿಯಾದ ಮಂಡಗದ್ದೆ ಕ್ಲಸ್ಟರ್ ಸಿ‌ಆರ್ ಪಿ ಯವರಾದ ಸರಸ್ವತಿ ರವರು ಉತ್ತಮವಾಗಿ ಕಾರ್ಯಕ್ರಮ ಅಯೋಜಿಸಿದ ಬಗ್ಗೆ ಸರ್ವರೂ ಮೆಚ್ಚುಗೆ ವ್ಯಕ್ತಪಡಿಸಿದರು.ಕ್ಲಸ್ಟರ್ ಕೇಂದ್ರ ದ ಅಭಿವೃದ್ಧಿ ಯ ಬಗ್ಗೆಯೂ‌ ಶ್ಲಾಘಿಸಿದರು.ನಾಗರಾಜ್..ಫೈರೋಜ್ ಶೋಭಾ ಮರಿಯಮ್ ಶಿಕ್ಷಕರು ಸೇವಾಭಿನ ಂದನೆಯನ್ನು ಸ್ವೀಕರಿಸಿದರು. ನಾಲೂರು ಸಿ ಆರ್ ಪಿ ಸಾದಿಕ್ ಅಹಮದ್ ಶುಭಕೋರಿದರು.ಕ್ಲಸ್ಟರ್ ನ ಸಮಸ್ತ ಶಿಕ್ಷಕರು ಭಾಗವಹಿಸಿದ್ದರು.ಸರ್ವರನ್ನು ಪ್ರಕಾಶ್ ಟಿ ಆರ್ ಶಿಕ್ಷಕರು ವಂದಿಸಿದರು.

ವರದಿ ಪ್ರಜಾ ಶಕ್ತಿ