ಲೋಕಸಭಾ ಚುನಾವಣೆ – 2024 ರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶ್ರೀ ಮಿಥುನ್ ಕುಮಾರ್ ಜಿ ಕೆ,ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆರವರ ನೇತೃತ್ವದಲ್ಲಿ 21ರಂದು ಸಂಜೆ ಶಿವಮೊಗ್ಗ ನಗರದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಪಥ ಸಂಚಲನವನ್ನು ಹಮ್ಮಿಕೊಂಡಿದ್ದು, ಸದರಿ ಪಥಸಂಚಲನವನ್ನು ಎಸ್ ಎನ್ ವೃತ್ತದಿಂದ ಪ್ರಾರಂಭಿಸಿ, ಗಾಂಧಿ ಬಜಾರ್, ಆರ್ ಎಸ್ ಪಾರ್ಕ್, ಸೀಗೆಹಟ್ಟಿ, ಓ ಟಿ ರಸ್ತೆ, ಎ ಎ ವೃತ್ತ, ನೆಹರು ರಸ್ತೆ, ಗೋಪಿ ವೃತ್ತ ಮಹಾವೀರ ವೃತ್ತದಿಂದ *ನೆಹರು ಕ್ರೀಡಾಂಗಣಕ್ಕೆ ಬಂದು ಮುಕ್ತಾಯ ಮಾಡಲಾಯಿತು.

ಸದರಿ ಪಥ ಸಂಚಲನದಲ್ಲಿ ಶ್ರೀ ಬಾಬು ಆಂಜನಪ್ಪ, ಪೋಲಿಸ್ ಉಪಾಧೀಕ್ಷಕರು, ಶಿವಮೊಗ್ಗ- ಎ ಉಪ ವಿಭಾಗ, ಶ್ರೀ ಪ್ರಕಾಶ್, ಪೊಲೀಸ್ ಉಪಾಧೀಕ್ಷಕರು, ಡಿಎಆರ್, ಶಿವಮೊಗ್ಗ, ಶ್ರೀ ರುದ್ರೇಶ್, ಆರ್.ಪಿ.ಐ, ಡಿಎಆರ್ ಶಿವಮೊಗ್ಗ, ಶ್ರೀ ಆನಂದ್, ಆರ್.ಪಿ. ಐ, ಡಿಎಆರ್ ಶಿವಮೊಗ್ಗ ಶ್ರೀ ರವಿ ಪಾಟೀಲ್, ಪಿಐ,ದೊಡ್ಡಪೇಟೆ ಪೊಲೀಸ್ ಠಾಣೆ, ಮತ್ತು ಪಿಎಸ್ಐ ಹಾಗೂ ಅಧಿಕಾರಿ ಸಿಬ್ಬಂದಿಗಳು ಹಾಗೂ ಕೆ.ಎಸ್.ಆರ್ ಪಿ ತುಕಡಿಯ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.

ವರದಿ ಪ್ರಜಾ ಶಕ್ತಿ