ಬಿಜೆಪಿ ಲೋಕಸಭೆ ಅಭ್ಯರ್ಥಿ ಬಿ ವೈ ರಾಘವೇಂದ್ರ ಪರ ರಾಜ್ಯದ್ಯಕ್ಷ ಮತ್ತು ಸಹೋದರರಾದ ಬಿ ವೈ ವಿಜಯೇಂದ್ರ ರವರು ತವರು ಕ್ಷೇತ್ರ ಶಿಕಾರಿಪುರದಲ್ಲಿ ಭರ್ಜರಿ ಪ್ರಚಾರ ನಡೆಸಿದರು.ಶಿಕಾರಿಪುರ ತಾಲ್ಲೂಕು ಕಾಗಿನಲ್ಲಿ ಶ್ರೀ ಮೂಕಾಂಬಿಕಾ ದೇವಸ್ಥಾನ ಮುಂಭಾಗದ ವೃತ್ತದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾಗಿನಲ್ಲಿ, ಮಾರವಳ್ಳಿ, ಹೊಸೂರು, ಗೊಗ್ಗ, ಜಕ್ಕಿನಕೊಪ್ಪ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಸಹೋದರ ಶ್ರೀ ಬಿ.ವೈ. ವಿಜಯೇಂದ್ರ ಮತಯಾಚಿಸಿದರು.

ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ಶೋಷಿತರ, ಬಡವರ, ದೀನ ದಲಿತರ, ಹಿಂದುಳಿದವರ, ಯುವಕರ, ಮಹಿಳೆಯರ, ರೈತರ, ಶ್ರಮಿಕರ, ಬೀದಿಬದಿ ವ್ಯಾಪಾರಸ್ಥರು ಸೇರಿದಂತೆ ಇನ್ನೂ ಅನೇಕ ವಲಯಗಳ ಅಭ್ಯುದಯಕ್ಕಾಗಿ ಕಾರ್ಯರೂಪಕ್ಕೆ ತಂದಿರುವ ಐತಿಹಾಸಿಕ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ನೆರೆದಿದ್ದ ದೈವದುರ್ಲಭ ಕಾರ್ಯಕರ್ತರ ಮುಂದೆ ತೆರೆದಿಡಲಾಯಿತು.

ಮುಂದಿನ ಮೂವತ್ತು ದಿನಗಳ ಕಾಲ ಕಾರ್ಯಕರ್ತರು ಕ್ಷೇತ್ರದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ಕೇಂದ್ರ ಸರ್ಕಾರದ ಸಾಧನೆಗಳನ್ನು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಪ್ರತಿ ಮನೆಗೆ ಮುಟ್ಟಿಸಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಈ ಮೂಲಕ ಮೋದಿ ಅವರ ಕೈಯನ್ನು ಬಲಪಡಿಸಲು ಕರೆಕೊಡಲಾಯಿತು.

ಈ ಸಂದರ್ಭದಲ್ಲಿ ಗಣ್ಯರಾದ ಶ್ರೀ ಗುರುಮೂರ್ತಿ , ಶ್ರೀ ಹನುಮಂತಪ್ಪ , ಶ್ರೀ ಭೂಕಾಂತ್ , ಶ್ರೀ ಗುರುರಾಜ್ ಸೇರಿದಂತೆ ಪಕ್ಷದ ಅನೇಕ ಹಿರಿಯರು ಮತ್ತು ಮುಖಂಡರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ