ಮುಂದಿನ ತಿಂಗಳಲ್ಲಿ ನಡೆಯುವ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಸ್ ಪಿ ದಿನೇಶ್ ರನ್ನ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಪಕ್ಷದಿಂದ ಉಚ್ಚಾಟಿಸಿ ಆದೇಶಿಸಿದ್ದಾರೆ.

ಇವರ ಜೊತೆಗೆ ಬೆಂಗಳೂರು ಪದವೀಧರ ಕ್ಷೇತ್ರದ ಫರ್ಡಿನಾಂಡ್ ಲಾರೆನ್ಸ್, ನೈರುತ್ಯ ಶಿಕ್ಷಕರ ಕ್ಷೇತ್ರದ ನಂಜೇಶ್(ಚಿಕ್ಕಮಗಳೂರು), ಆಗ್ನೇಯ ಶಿಕ್ಷಕರ ಕ್ಷೇತ್ರದ ವಿನೋದ್ ಶಿವರಾಜ್, ಚಿತ್ರದುರ್ಗ ಜಿಲ್ಲೆಯ ಲೋಕೇಶ್ ತಾಳಿಕಟ್ಟೆ ರವರನ್ನ ಪಕ್ಷದಿಂದ ಆರು ವರ್ಷದ ವರೆಗೆ ಉಚ್ಚಾಟಿಸಿ ಆದೇಶಿಸಿದ್ದಾರೆ.

ವರದಿ ಪ್ರಜಾ ಶಕ್ತಿ