ಹೋಟೆಲ್ ಉಡುಪಿ ಫುಡ್ ಪ್ಯಾಲೇಸ್ ಗ್ರಾಂಡ್ ಓಪನಿಂಗ್…

ಶಿವಮೊಗ್ಗ ನಗರದ LLR ರಸ್ತೆಯಲ್ಲಿ ನೂತನವಾಗಿ ಹೋಟೆಲ್ ಉಡುಪಿ ಫುಡ್ ಪ್ಯಾಲೇಸ್ ಪ್ರಾರಂಭವಾಗಿದೆ. ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾದ ಡಾ.ಸತೀಶ್ ಕುಮಾರ್ ಶೆಟ್ಟಿ ರವರು ನೂತನದ ಹೋಟೆಲಿಗೆ ಭೇಟಿ ನೀಡಿ ಶುಭ ಹಾರೈಸಿದರು. ಸಾಯಿ ಇಂಟರ್ನ್ಯಾಷನಲ್ ಮಾಲೀಕರಾದ ಶ್ರೀನಾಥ್ ಹೆಗ್ಡೆ, ಹೋಟೆಲ್ ಶುಭಂ ಮಾಲಿಕರಾದ ಉದಯ ಕಡಂಬ ,ರಂಗಯ್ಯ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಟೀಮ್ ಉಡುಪಿ ಫುಡ್ ಪ್ಯಾಲೇಸ್ ಮುಖ್ಯಸ್ಥರು ಪ್ರಸ್ತುತ ಕರ್ನಾಟಕದಲ್ಲಿ 15 ಬ್ರಾಂಚ್ ಗಳನ್ನು ನಾವು ಹೊಂದಿದ್ದೇವೆ. ಇಂದು ಶಿವಮೊಗ್ಗದಲ್ಲಿ ನೂತನವಾಗಿ ಹೋಟೆಲ್ ಮತ್ತು ಲಾಡ್ಜ್ ಪ್ರಾರಂಭಿಸಿದ್ದೇವೆ. ಮುಂದಿನ ತಿಂಗಳಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭವಾಗುತ್ತದೆ ಎಂದರು.ನಗರದ ಜನತೆ ನಮ್ಮ ಹೋಟೆಲ್ ಗೆ ಬಂದು ಸಹಕಾರ ನೀಡಿ ಆಶೀರ್ವಾದ ನೀಡಬೇಕಾಗಿ ವಿನಂತಿಸಿದರು.

ವರದಿ ಪ್ರಜಾ ಶಕ್ತಿ