ನೈರುತ್ಯ ಪದವೀಧರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾದ ಕೆ.ಕೆ ಮಂಜುನಾಥ್ ಅವರ ಪರವಾಗಿ ಇಂದು ಶಾಲೆ ಹಾಗೂ ಕಾಲೇಜುಗಳಿಗೆ ಕಾಂಗ್ರೆಸ್ ಮುಖಂಡರಾದಂತ ಎಂ ಶ್ರೀಕಾಂತ್ ರವರು ಭೇಟಿ ನೀಡಿ ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಆದಂತಹ ನಾಗರಾಜ್ ಕಂಕರಿ, ಪದವೀಧರ ಘಟಕದ ಜಿಲ್ಲಾ ಅಧ್ಯಕ್ಷರಾದಂತಹ ಅರ್ಜುನ್ ಪಂಡಿತ್, ಯುವ ಕಾಂಗ್ರೆಸ್ ನಗರ ಅಧ್ಯಕ್ಷರಾದಂತಹ ವಿನಯ್ ತಾಂದಲೆ, ಒಬಿಸಿ ನಗರ ಅಧ್ಯಕ್ಷರಾದಂತಹ ಮೋಹನ್, ಕಾಂಗ್ರೆಸ್ ಮುಖಂಡರಾದ ದೇವುಕುಮಾರ್, ಮಸ್ತಾನ್, ರಾಜು, ಶಿವಕುಮಾರ್, ದರ್ಶನ್ ಹಾಗೂ ಇನ್ನಿತರವರಿದ್ದರು.

ವರದಿ ಪ್ರಜಾ ಶಕ್ತಿ