ಕಾರ್ಯವ್ಯಾಪ್ತಿಯಲ್ಲಿ ಬರುವ ನಾಗತಿ ಬೆಳಗಲು ತಾಂಡದ ನಿವಾಸಿಗಳಿಗೆ ಸ್ಮಶಾನಕ್ಕೆಂದು ಕಾಯ್ದಿರಿಸಿರುವ ಭದ್ರಾವತಿ ತಾಲೂಕು ,ಕೂಡ್ಲಿಗೆರೆ ಹೋಬಳಿ ,ಹೊಸಳ್ಳಿ ಗ್ರಾಮದ ಸ.ನಂ 16 ರಲ್ಲಿ 1 ಎಕರೆ ಜಮೀನನ್ನು ಸ್ಮಶಾನಕ್ಕೆ ಕಾಯ್ದಿರಿಸಲು ಆ ಜಾಗವು ನಾಗತಿ ಬೆಳಗಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವುದರಿಂದ ನಾಗತಿಬೆಳಗಲು ತಂಡಕ್ಕೆ ಸ್ಮಶಾನಕ್ಕಾಗಿ ಮಂಜೂರು ಮಾಡಿಕೊಡಲು ಹಾಗೂ ಈ ಹಿಂದಿನಿಂದಲೂ ಇದೇ ಜಾಗದಲ್ಲಿ ಬಹಳ ವರ್ಷದಿಂದ 10-15 ಹೆಣವನ್ನು ಹೂಳುವುದು , ಸುಡುತ್ತಿರುವುದು ಆಗಿರುತ್ತದೆ .ಸರ್ವೆ ನಂ 16ರಲ್ಲಿ 1 ಎಕರೆ ಮುಪತ್ತಿ ನಲ್ಲಿರುವ ಜಾಗವನ್ನು ವಜಾ ಮಾಡಿ ಸ್ಮಶಾನಕ್ಕಾಗಿ ಕಾಯ್ದಿರಿಸುವ ಜಾಗವೆಂದು ಆರ್ .ಟಿ.ಸಿ ನಲ್ಲಿ ನಮೂದು ಮಾಡಿ ಸೂಕ್ತ ಕ್ರಮ ವಹಿಸಲು ನಾಗತಿಬೆಳಗಲು ಗ್ರಾಮದ ಗ್ರಾಮಸ್ಥರ ಪರವಾಗಿ ಆದೇಶ ಮಾಡಿ ಕೊಡಬೇಕಾಗಿ ಮನವಿ ಮಾಡಿಕೊಂಡರು .ಈ ಸಂದರ್ಭದಲ್ಲಿ ಶಶಿಕುಮಾರ್ ವೈ ರಾಜ್ಯಾಧ್ಯಕ್ಷರು ,ಯೋಗೀಂದ್ರ ನಾಯ್ಕ ಗೌರವಾಧ್ಯಕ್ಷರು ,ನೇತ್ರ ಆರ್ ಜಿಲ್ಲಾ ಕಾರ್ಮಿಕ ಕಾರ್ಯದರ್ಶಿ ,ಬಿ.ಓ ಚಂದ್ರಕಲಾ ರಾಜ್ಯ ಗೌರವಾಧ್ಯಕ್ಷ ರು ,ಕೃಷ್ಣಾನಾಯ್ಕ ಜಿಲ್ಲಾಧ್ಯಕ್ಷರು ,ನಾಗರಾಜ ನಾಯ್ಕ ಎಂ ವಕೀಲರು ಜಿಲ್ಲಾ ಅಧ್ಯಕ್ಷರು ದಾವಣಗೆರೆ ,ರೀಟಾ ಜಿಲ್ಲಾ ಸಂಚಾಲಕಿ ,ಶಿವಲಿಂಗಪ್ಪ ಗೌರವಾಧ್ಯಕ್ಷರು ,ಅರ್ಪಿತಾ ಕಾರ್ಯದರ್ಶಿ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ