ಶಿವಮೊಗ್ಗ ನಗರದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ತಮ್ಮ ಕಚೇರಿ ಕರ್ತವ್ಯ ಭವನದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ, ಜಲ ಮಂಡಳಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಸಾರಿಗೆ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಶಿವಮೊಗ್ಗ ನಗರದ ಸಮಗ್ರ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾಗಿರುವ ಅಗತ್ಯ ಕ್ರಮಗಳು ಹಾಗೂ ಜನತೆಗೆ ಒದಗಿಸಬೇಕಾದ ಮೂಲಸೌಕರ್ಯಗಳ ಕುರಿತು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ

  1. UGDಗೆ ಸಂಬಂಧಿಸಿದಂತೆ.
  2. ಡೆಂಗ್ಯೂ ಜ್ವರದ ಮುಂಜಾಗ್ರತ ಕ್ರಮಗಳು.
  3. ಶಿವಮೊಗ್ಗ ನಗರದ KSRTCಸಿ ಬಸ್ ನಿಲ್ದಾಣದ ಸುತ್ತಮುತ್ತಲಿನಲ್ಲಾಗಿರುವ ಬೀದಿ ದೀಪಗಳ ಸಮಸ್ಯೆ ಕುರಿತಂತೆ.
  4. ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ KSRTC ಬಸ್ ಸಿಗದೇ ಇರುವ ಕುರಿತು.
  5. ಶಿವಮೊಗ್ಗ ನಗರದ ವಿವಿಧಡೆ ಪ್ರಿಪೇಡ್ ಆಟೋ ಕೌಂಟರ್ ತೆರೆಯುವ ಕುರಿತು
  6. ಶಿವಮೊಗ್ಗ ನಗರದ ಬಡಾವಣೆಗಳಲ್ಲಿ ನಾಮಫಲಕ ಅಳವಡಿಕೆಯ ಕುರಿತು.
  7. ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನವರೆಗೆ ಬೀದಿ ದೀಪಗಳನ್ನು ಸರಿಪಡಿಸುವಂತೆ ಆದೇಶಿಸಲಾಯಿತು.

ವರದಿ ಪ್ರಜಾ ಶಕ್ತಿ