ಸಂಸದರಾದ ಬಿ ವೈ ರಾಘವೇಂದ್ರ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿ ಬಳಗದ ವತಿಯಿಂದ ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಭಗವಂತ ಇನ್ನು ಹೆಚ್ಚಿನ ಆಯಸ್ಸು ಆರೋಗ್ಯ ದೊರಕಿಸಿ ಜನಸೇವೆ ಮಾಡಲು ಶಕ್ತಿ ನೀಡುವಂತೆ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ಮತ್ತಷ್ಟು ಹೆಚ್ಚಿನ ಯಶಸ್ಸು ದೊರಕಲಿ ಎಂದು ಅಭಿಮಾನಿ ಬಳಗ ವಿಶೇಷವಾಗಿ ಪ್ರಾರ್ಥಿಸಿದರು.

ನಂತರ ನಗರದ ಶಾರದಾ ಅಂಧರ ವಿಕಾಸ ಶಾಲೆ, ತರಂಗ ಸೇರಿದಂತೆ ಇನ್ನು ಅನೇಕ ದೈಹಿಕ ಅಂಗವಿಕಲ ಚೇತನ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿರುವ ಮಕ್ಕಳೊಂದಿಗೆ ಕೆಲ ಸಮಯ ಕಳೆದು ಸಿಹಿ ವಿತರಿಸಿ ವೈಯುಕ್ತಿಕ ದೇಣಿಗೆ ನೀಡಿದರು.

ತದನಂತರ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಮಧ್ಯಾಹ್ನದ ಉಪಾಹಾರ ವಿತರಿಸಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ನೀವು ತೋರಿಸಿದ ಬೆಲೆ ಕಟ್ಟಲಾಗದ ನಿಸ್ವಾರ್ಥ ಪ್ರೀತಿ ಮತ್ತು ಆಶೀರ್ವಾದ ನನ್ನನ್ನು ಮತ್ತಷ್ಟು ಮಾನಸಿಕವಾಗಿ ಬಲಶಾಲಿಯನ್ನಾಗಿಸಿದೆ. ಜೊತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡುವ ಹೊಸ ಚೈತನ್ಯ ದೊರಕಿದೆ. ಈ ಮೂಲಕ ನಿಮ್ಮ ಅಶೋತ್ತರಗಳಿಗೆ ಸದಾ ಜೊತೆಯಾಗಿ ನಿಲ್ಲುವ ವಾಗ್ದಾನ ಮಾಡುತ್ತೇನೆ.

ನಿಮ್ಮ ಈ ನಿರಂತರ ಪ್ರೀತಿ, ನನ್ನ ಮೇಲಿನ ಅಚಲ ವಿಶ್ವಾಸ, ಮೌಲ್ಯಧಾರಿತ ನಂಬಿಕೆ, ನಿರಂತರ ಸಹಕಾರ ಎಂದೆಂದಿಗೂ ಹೀಗೆಯೇ ಇರಲಿ ಎಂದು ಸದಾ ಆಶಿಸುತ್ತೇನೆ. ಈ ಸಂದರ್ಭದಲ್ಲಿ ನಿಶ್ಚಿತ್ ಬಳ್ಳಕೆರೆ ಸಂತೋಷ್ ದಿವಾಕರ್ ಶೆಟ್ಟಿ ರಾಜೇಶ್ ಕಾಮತ್ ಪ್ರವೀಣ್ ಪಾಟೀಲ್ ವಿನಯ್ ಮುಂತಾದ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.

ವರದಿ ಪ್ರಜಾ ಶಕ್ತಿ