ಈ ಕೋರೋನ ಮಹಾಮಾರಿಯ ತೀವ್ರತೆಗೆ ಎಲ್ಲರೂ ನಲುಗಿ ಹೋಗಿದ್ದಾರೆ. ಜನರು ವ್ಯಾಪಾರ ವಹಿವಾಟಿಲ್ಲದೆ ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ಶಿವಮೊಗ್ಗದ ಬಹುಪಾಲು ಜನರು ಮೆಗಾನ್ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಆಸ್ಪತ್ರೆಗೆ ಬರುವವರು ಎಲ್ಲರೂ ಕೂಡ ನೋವಿನಿಂದಲೇ ಇರುತ್ತಾರೆ. ಎಂಥ ಕಷ್ಟ ಕಾಲದಲ್ಲೂ ಮೆಗ್ಗಾನ್ ಆಸ್ಪತ್ರೆಯಲ್ಲಿ ವಾಹನ ನಿಲುಗಡೆಗೆ ಶುಲ್ಕ ವಿಧಿಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಮಾನವೀಯ ನೆಲೆಗಳಲ್ಲಿ ಗಮನಹರಿಸಬೇಕು. ನೊಂದವರಿಗೆ ಇನ್ನೂ ಕಷ್ಟ ಕೊಡದೆ ತಕ್ಷಣ ಈ ಪಾರ್ಕಿಂಗ್ ಶುಲ್ಕವನ್ನು ಸ್ಥಗಿತಗೊಳಿಸಬೇಕು ಎಂದು ಸಾರ್ವಜನಿಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು. ಸರ್ಕಾರವು ಈ ಬಗ್ಗೆ ಗಮನ ಹರಿಸುತ್ತದೆ ಎಂದು ಭಾವಿಸಿ
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ