ಜೋಡುಕೆರೆ ಕಂಬಳ…

ಮಲೆನಾಡಿನ ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ಮಲೆನಾಡ ಕಂಬಳ ನಗರದ ಮಾಚೇನಹಳ್ಳಿಯಲ್ಲಿ ಏಪ್ರಿಲ್ 19 ಮತ್ತು 20ರಂದು  2025 ಜೋಡುಕೆರೆ ಕಂಬಳ ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಶೆಟ್ಟಿ ಹೇಳಿದ್ದಾರೆ.ಕಂಬಳ ಸಮಿತಿಯು ಶಿವಮೊಗ್ಗದ ಸಂಸದರಾದ ಬಿ ವೈ ರಾಘವೇಂದ್ರ ರವರನ್ನು ಭೇಟಿ ಮಾಡಿ ಮಲೆನಾಡು ಕಂಬಳದ ವಿಶೇಷತೆಯನ್ನು ಸವಿಸ್ತಾರವಾಗಿ ತಿಳಿಸಿದರು.ಐತಿಹಾಸಿಕ ಕಂಬಳದ ವಿಶೇಷತೆಯನ್ನು ಆಲಿಸಿದ ಸಂಸದ ಬಿ ವೈ ರಾಘವೇಂದ್ರ ಅವರು ಕಂಬಳಕ್ಕೆ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದರು. ರಾಜಧಾನಿ ಬೆಂಗಳೂರಿನಲ್ಲಿ ಪ್ರಥಮ ಬಾರಿ ಕಂಬಳ ಮಾಡಿ ಯಶಸ್ವಿಯಾಗಿದ್ದೀರಿ.ಅದೇ ರೀತಿ ಶಿವಮೊಗ್ಗದ ಮಲೆನಾಡಿನಲ್ಲೂ ಕಂಬಳ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಶಿವಮೊಗ್ಗ ಜಿಲ್ಲೆಯ ಎಲ್ಲಾ ಸಮಾಜದ ಮುಖಂಡರು ಪದಾಧಿಕಾರಿಗಳನ್ನು ಶೀಘ್ರದಲ್ಲಿ ಭೇಟಿ ಮಾಡುತ್ತೇವೆ. ನಿಮ್ಮೆಲ್ಲರ ಸಹಕಾರ ಅತ್ಯಮೂಲ್ಯ ಎಂದರು.ಮಲೆನಾಡು ಕಂಬಳಕೆ ಶಿವಮೊಗ್ಗ ಜಿಲ್ಲೆಯ ಮತ್ತು ಸುತ್ತಮುತ್ತಲಿನ ಚಿಕ್ಕಮಂಗಳೂರು ದಾವಣಗೆರೆ ಚಿತ್ರದುರ್ಗ ಜಿಲ್ಲೆಯ ಕಂಬಳ ಲಕ್ಷಾಂತರ ವೀಕ್ಷಕರು ಆಗಮಿಸುತ್ತಾರೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಗೂ ಪ್ರತಿ ತಾಲೂಕಿಗೆ ಕಂಬಳ ಸಮಿತಿ ಭೇಟಿ ನೀಡಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಎಂದು ಅಧ್ಯಕ್ಷ ಲೋಕೇಶ್ ಶೆಟ್ಟಿ ಹೇಳಿದರು.

ಕಂಬಳ ಕಾರ್ಯಕ್ರಮದ ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ
9845765100
ಲೋಕೇಶ್ ಶೆಟ್ಟಿ