ಶಿವಮೊಗ್ಗ ನಗರದಲ್ಲಿ 2024ನೇ ಸಾಲಿನ ಅಗ್ನಿಪಥ್ ಯೋಜನೆಯಡಿ ನಡೆಯುತ್ತಿರುವ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಗೆ 8ನೇ ದಿನವಾದ ಇಂದು ಬೆಂಗಳೂರಿನ ಮೇಜರ್ ಜನರಲ್ ಹರಿ ಪಿಳ್ಳೈ, ಹೆಚ್ಚುವರಿ ನೇಮಕಾತಿ ಮಹಾನಿರ್ದೇಕರು (ಕರ್ನಾಟಕ ಮತ್ತು ಕೇರಳ) ಇವರು ಪಾಲ್ಗೊಂಡು ನೇಮಕಾತಿ ರ‍್ಯಾಲಿಯ ಪ್ರಕ್ರಿಯೆಯನ್ನು ಉದ್ಘಾಟಿಸಿದರು.

ಆ. 30 ರಂದು ವೈದ್ಯಕೀಯ ಪರೀಕ್ಷೆಯು ಸಹ ಅಂತ್ಯಗೊಳ್ಳುತ್ತಿದೆ. ಈ ದಿನಗಳಲ್ಲಿ ತಾಂತ್ರಿಕ, ಲಿಪಿಕ ಮತ್ತು ವೃತ್ತಿಪರ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುವುದು ಎಂದು ತಿಳಿಸಿದರು.

ವರದಿ ಪ್ರಜಾ ಶಕ್ತಿ