AKWJS…

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿ ವಿಸರ್ಜನ ಮೆರವಣಿಯ ಉತ್ಸವವನ್ನು ಹಾಗೂ ಈದ್ ಮಿಲಾದ್ ಮೆರವಣಿಗೆಯನ್ನು ಶಿವಮೊಗ್ಗದ ಜನತೆಗೆಯಲ್ಲಿ ಭಯದ ವಾತಾವರಣವನ್ನು ಮೆಟ್ಟಿ ನಿಂತು, ಗಲಭೆಗಳು, ದುರ್ಘಟನೆಗಳು, ಅಹಿತಕರ ಘಟನೆಗಳು ನಡೆಯದಂತೆ, ಸಮರ್ಪಕ ವಾಗಿ ನಿಭಾಯಿಸಿ ಜಿಲ್ಲಾ ರಕ್ಷಣಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗಗಳಿಗೆ ಅಭಿನಂದನೆಗಳು.ಎಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗಗಳಿಗೆ ಅಭಿನಂದನ ಗೌರವ ಸಮರ್ಪಣೆ ಸಲ್ಲಿಸಲು ಸಾಧ್ಯವಾಗದ ಕಾರಣ ಇವರ ನೇತೃತ್ವವನ್ನು ವಹಿಸಿದ ಜಿಲ್ಲಾ ರಕ್ಷಣಾಧಿಕಾರಿಗಳಾದ ಜಿ ಕೆ ಮಿಥುನ್ ಕುಮಾರ್ ರವರಿಗೆ ಇನ್ನಷ್ಟು ಇದೇ ರೀತಿಯಲ್ಲಿ ಉತ್ತಮವಾದ ಕೆಲಸಗಳು ಮಾಡಲಿ ಎಂದು ಹಾರೈಸಿ ಇಂದು ಅಖಿಲ ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘ(ರಿ) ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಗೌರವ ಸಮರ್ಪಣೆಯನ್ನು, ಸನ್ಮಾನ ಮಾಡುವುದರ ಮೂಲಕ ಮಾಡಲಾಯಿತು.

ಇದೆ ವೇಳೆ ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ) ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಅನಿಲ್ ಶಿವಮೊಗ್ಗ (ಬಿಟಿವಿ ವರದಿಗಾರು), ಗೌರವಾಧ್ಯಕ್ಷರಾದ ಸುರೇಶ್ ಶೆಟ್ಟಿ, ನರೇಂದ್ರಬಾಬು, ಕಾರ್ಯದರ್ಶಿ ನೂತನ್ ಮುಲ್ಯ, ಪದಾಧಿಕಾರಿಗಳಾದ ಮಂಜುನಾಥ್ ಶೆಟ್ಟಿ ,ನಾಗರಾಜ್, ಇರ್ಫಾನ್, ಸಂತೋಷ್ ರಾಮ್, ಅರುಣ್ ಕುಮಾರ್, ಪ್ರಸನ್ನ, ಸುರೇಶ್, ಜೊತೆಯಲ್ಲಿ ಭಾಗಿಯಾಗಿದ್ದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *