ಶಿವಮೊಗ್ಗ ಜಿಲ್ಲಾ ಆಟೋ ಚಾಲಕರ ಸಂಘಗಳ ಒಕ್ಕೂಟದ ವತಿಯಿಂದ ನಗರದ ಎಲ್ಲಾ ಆಟೋ ನಿಲ್ದಾಣಗಳಿಗೆ ಭೇಟಿ ನೀಡುತ್ತಿದೆ. ಒಕ್ಕೂಟದ ಧ್ಯೇಯ ಉದ್ದೇಶಗಳನ್ನು ತಿಳಿಸಿ ಒಕ್ಕೂಟವನ್ನು ಬಲಿಷ್ಠವಾಗಿ ಕಟ್ಟಿ ಆಟೋ ಚಾಲಕರ ಕಷ್ಟಗಳಿಗೆ ಸ್ಪಂದಿಸಿ, ಮುಂದೆ ಸರ್ಕಾರ ಹಾಗು ಇತರೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿ, ಶಿವಮೊಗ್ಗದ ಇತಿಹಾಸದಲ್ಲೇ ಹೊಸ ಮಾದರಿಯಲ್ಲಿ ಒಕ್ಕೂಟವನ್ನು ರಚಿಸಿ ಪ್ರತಿಯೊಬ್ಬ ಆಟೋ ಚಾಲಕನಿಗೂ ನ್ಯಾಯ ದೊರಕಿಸಬೇಕು, ಆತನ ಕಷ್ಟಕ್ಕೆ ಸ್ಪಂದಿಸಬೇಕು ಎಂಬ ನಿಟ್ಟಿನಲ್ಲಿ ಒಕ್ಕೂಟವನ್ನು ಕಟ್ಟಲು ಮುಂದಾಗಿದ್ದಾರೆ. ಜಿಲ್ಲಾದ್ಯಂತ ಎಲ್ಲಾ ಆಟೋ ಚಾಲಕರನ್ನು ಭೇಟಿ ಮಾಡಿ ಒಕ್ಕೂಟವನ್ನು ಬಲಿಷ್ಠಗೊಳಿಸಲು ಮಾತುಕತೆ ನಡೆಸಲಾಗಿದೆ. ಅದರಂತೆ ನಗರಾದ್ಯಂತ ಆಟೋ ಚಾಲಕರನ್ನು ಭೇಟಿಮಾಡಿ ಒಕ್ಕೂಟಕ್ಕೆ ಬೆಂಬಲ ನೀಡಲು ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಒಬ್ಬ ಆಟೋ ಚಾಲಕನಿಗೂ ಸರ್ಕಾರದ ಸೌಲಭ್ಯಗಳು ಹಾಗೂ ಆತನಿಗೆ ಗೌರವಯುತವಾಗಿ ಬದುಕುವಂತಹ ಎಲ್ಲಾ ವ್ಯವಸ್ಥೆಗಳನ್ನು ಒಕ್ಕೂಟ ಮಾಡಲಿದೆ ಎಂಬ ನಿಟ್ಟಿನಲ್ಲಿ ಒಕ್ಕೂಟವನ್ನು ಸ್ಥಾಪನೆ ಮಾಡಲು ಮುಂದಾಗಿರುವ ಸಂಸ್ಥಾಪಕ ಕಿರಣ್ ಕುಮಾರ್ ಎಚ್ ಎಸ್, ಅಧ್ಯಕ್ಷ ಜಯಪ್ಪ, ಅದು ಮಾಧ್ಯಮ ಸಲಹೆಗಾರರಾಗಿ ಅನಿಲ್ ಶಿವಮೊಗ್ಗ, ಕಾನೂನು ಸಲಹೆಗಾರರಾಗಿ ಅನಿಲ್ ಕುಮಾರ್, ಮಾರ್ಗದರ್ಶಕರಾಗಿ ಶ್ರೀನಿವಾಸ್, ಮಾರ್ಗದರ್ಶಕರಾಗಿ ರೈಲ್ವೆ ಆನಂದಣ್ಣ, ಒಕ್ಕೂಟದ ಬೆನ್ನೆಲುಬಾಗಿ ಶಿವಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153