ಇಂದು ಬೆಳಿಗ್ಗೆ ಸಕ್ಕರೆಬೈಲು ಆನೆ ಬಿಡಾರದ ಮುಂದೆ ಎಂದಿನಂತೆ ಪ್ರವಾಸಿಗರು ಬಂದಿದ್ದರು , ಆದರೆ ಇಂದು ಅಧಿಕಾರಿಗಳು ಪ್ರವೇಶವನ್ನು ನಿಷೇಧಿಸಿದ್ದಾರೆ , ನಿನ್ನೆ ಭಾನುವಾರ ತೆರೆದಿದ್ದ ಆನೆ ಬಿಡಾರ ಇಂದಿನಿಂದ ತೆರೆಯುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ದೂರದ ಊರುಗಳಿಂದ ಬಂದಿದ್ದ ಪ್ರವಾಸಿಗರು ಬಂದ ದಾರಿಗೆ ಸಂಕವಿಲ್ಲದೆ ವಾಪಸ್ ಹೋಗಬೇಕಾಗಿದೆ. ಕೋವಿಡ 3 ನೇ ಅಲೆಯ ಕಾರಣದಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಇರುವ ಎಲ್ಲಾ ಪ್ರವಾಸಿ ತಾಣಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಗುತ್ತಿದೆ.ಆದ್ದರಿಂದ ಪ್ರವಾಸಿಗರು ಸೂಕ್ತ ಮಾಹಿತಿ ಪಡೆದು ನಂತರ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಉತ್ತಮ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153