ಮಹಾಶಿವರಾತ್ರಿ ಅಂಗವಾಗಿ ಈಶ್ವರ ವನದಲ್ಲಿ ರಕ್ತದಾನ ಶಿಬಿರ
ಮಹಾಶಿವರಾತ್ರಿ ಅಂಗವಾಗಿ ನವ್ಯಶ್ರೀ ಈಶ್ವರವನ ನಾಗೇಶ್ ರವರ ನೇತೃತ್ವದಲ್ಲಿ ಅಬ್ಬಲೆಗೆರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.ಭಾರತೀಯ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ ಹಾಗೂ ರೋಟರಿ ಮಿಡ್ ಟೌನ್ ರಕ್ತ ನಿಧಿ ಸಹಯೋಗದೊಂದಿಗೆ ಆಯೋಜಿಸನಾದ ರಕ್ತದಾನ ಶಿಬಿರದಲ್ಲಿ ಈಶ್ವರನ ಭಕ್ತರು ನವ್ಯಶ್ರೀ ಟ್ರಸ್ಟಿನ ಪದಾಧಿಕಾರಿಗಳು ಸಾರ್ವಜನಿಕರು ರಕ್ತದಾನ ಮಾಡಿ ಶಿವನ ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ಉಚಿತವಾಗಿ ರಕ್ತದ ಗುಂಪು ತಪಾಸಣೆ ಮತ್ತು ಹಿಮೋಗ್ಲೋಬಿನ್ ತಪಾಸಣೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ರಕ್ತದಾನಿಗಳಿಗೆ ನವ್ಯಶ್ರೀ ನಾಗೇಶ್ ಅವರು ಪ್ರಮಾಣ ಪತ್ರ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿಸಾರ್ವಜನಿಕ ಸಂಪರ್ಕ ಅಧಿಕಾರಿ ಶೃತಿ ಎಸ್ ಕೆ. ಹಿರಿಯ ಸಂಚಾಲಕ ಅಧಿಕಾರಿ ಹಾಗೂ ರಕ್ತದಾನಿ ಧರಣೇಂದ್ರ ದಿನಕರ್. ವೈದ್ಯಾಧಿಕಾರಿ ಡಾ. ಎಸ್ ದಿನಕರ್. ಲಕ್ಷ್ಮಿ. ನವ್ಯಶ್ರೀ ನಾಗೇಶ್. ಪ್ರದೀಪ್. ಉಪಸ್ಥಿತರಿದ್ದರು.