ದೇಶಕ್ಕಾಗಿ ನಾವು.ರಿ. ತೀರ್ಥಹಳ್ಳಿಯ ತುರ್ತು ಸೇವಾ ಸಹಾಯವಾಣಿಗೆ ನಿನ್ನೆ ಅಂಡಗದೂದೂರು ಗ್ರಾ.ಪಂ. ವ್ಯಾಪ್ತಿಯ ಟೆಂಕಬೈಲ್ ಸಮೀಪದ ರಾವೆಯಿಂದ ಕರೆ ಮಾಡಿ ಅವರ ಸಂಭಂಧಿಯೊರ್ವರು ಕೊರೋನಾ ಸೊಂಕಿನಿಂದ ಕುಂದಾಪುರದ ಆಸ್ಪತ್ರೆಯಲ್ಲಿ ಮೃತರಾಗಿದ್ದು ನಾಳೆ ಸ್ವಗ್ರಾಮಕ್ಕೆ ಮೃತರ ಪಾರ್ಥೀವ ಶರೀರವನ್ನ ತರಲಾಗತ್ತೆ ಸುರಕ್ಷತಾ ದೃಷ್ಟಿಯಿಂದ ನಿಮ್ಮ ತಂಡದವರು ಬಂದು ಶವಸಂಸ್ಕಾರ ನಡೆಸಿಕೊಡಬೇಕೆಂದು ಹೇಳಿದ್ದರು … ಇಂದು ಅಲ್ಲಿನ ಸ್ಥಳೀಯ ಗ್ರಾಪಂ ಅಧ್ಯಕ್ಷರು ಸದಸ್ಯರು ಆರಕ್ಷಕ ಸಿಬ್ಬಂದಿಗಳ ಮಾರ್ಗದರ್ಶನದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನ ಅನುಸರಿಸಿ ವಿಧಿವಿಧಾನಗಳೊಂದಿಗೆ ಅತ್ಯಸಂಸ್ಕಾರ ಮಾಡಲಾಯಿತು…
ಈ ಸಂಧರ್ಭದಲ್ಲಿ ಸುಭಾಷ್ ಕುಲಾಲ್ ಪೂರ್ಣೇಶ್ ಕೆಳಕೆರೆ Shahab Gn ಆಂಬುಲೆನ್ಸ್ ಚಾಲಕರಾದ ಮುನ್ನ ಅವರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು…
ಯಾವುದೇ ತುರ್ತು ಸಂಧರ್ಭಗಳಲ್ಲಿ ಯಾವುದೇ ತರಹದ ಸಹಾಯಕ್ಕಾಗಿ ದೇಶಕ್ಕಾಗಿ ನಾವು ಸಂಘಟನೆಯನ್ನ ಸಂಪರ್ಕಿಸಿ….
ಶ್ರೀಯುತ ಕಿಮ್ಮನೆ ರತ್ನಾಕರ್ ಆದರ್ಶ ಹುಂಚದಕಟ್ಟೆ Niketh Raj Mourya ಅವರ ಮಾರ್ಗದರ್ಶದಲ್ಲಿ ದೇಶಕ್ಕಾಗಿ ನಾವು ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ..