
ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆ ಮತ್ತು ಗುಡಿ ಎಂಪೆÇೀರಿಯಂ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜೂ. 1 ರಂದು ಭಾನುವಾರ ಸಂಜೆ 5.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ‘ಸ್ನೇಹದ ಕಡಲಲ್ಲಿ’ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗಾಯತ್ರಿ ಜ್ಯುವೆರ್ಸ್ ಮಾಲೀಕ ಹಾಗೂ ಕಾರ್ಯಕ್ರಮ ವ್ಯವಸ್ಥಾಪಕ ಶಶಿ ಎಸ್. ಮಂಗಳಗಾರ್ ತಿಳಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ನಾಗರೀಕರಿಗೆ ಸಂಗೀತದ ಮನರಂಜನೆ ನೀಡುವ ಮೂಲಕ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ ಅವರು ಕಾರ್ಯಕ್ರಮ ಉದ್ಘಾಟಿಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಚಿತ್ರರಂಗದ ಹಿರಿಯ ನಟ ಪ್ರಣಯರಾಜ ಡಾ. ಶ್ರೀನಾಥ್, ಖ್ಯಾತ ಹಿಂದೂಸ್ಥಾನಿ ಗಾಯಕ ಉಸ್ತಾದ್ ಹುಮಾಯಾನ್ ಹರ್ಲಾಪುರ, ಶಿವಮೊಗ್ಗ ಟೈಮ್ಸ್ ಪತ್ರಿಕೆ ಸಂಪಾದಕ ಚಂದ್ರಕಾಂತ್, ಖ್ಯಾತ ಅಂಕಣಕಾರ ಎಂ. ಎನ್. ಸುಂದರಾಜ್, ಬಂಟರ ಸಂಘದ ಅಧ್ಯಕ್ಷ ಡಾ. ಸತೀಶ್ ಕುಮಾರ್ ಶೆಟ್ಟಿ, ಹಿರಿಯ ನ್ಯಾಯವಾದಿ ಮಧುಸೂಧನ್, ಗುಡಿ ಎಂಪೆÇೀರಿಯಂ ಪಾಲುದಾರರಾದ ಚಿತ್ರಾ ಗಿರೀಶ್ ಭಾಗವಹಿಸಲಿದ್ದಾರೆ.
ಎಚ್ಚರಿಕೆ ಪತ್ರಿಕೆ ಸಂಪಾದಕ ವೈ.ಕೆ. ಸೂರ್ಯನಾರಾಯಣ್ ಅಧ್ಯಕ್ಷತೆ ವಹಿಸಲಿದ್ದಾರೆಂದು ತಿಳಿಸಿದರು.
ಕಲಾ ಪೆÇೀಷಕರಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ವಾಣಿಜ್ಯ ತೆರಿಗೆ ಆಯುಕ್ತರಾದ ವಿಜಯ್ ಕುಮಾರ್ ಎಂ. ಭರತ್ ಹಾಗೂ ಹೆಚ್ಚುವರಿಪೆÇಲೀಸ್ ಅಧೀಕ್ಷಕ ಅನಿಲ್ ಕುಮಾರವ ಭೂಮರೆಡ್ಡಿ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಂಗೀತ ಸಂಜೆ ಕಾರ್ಯಕ್ರಮವನ್ನು ಬೆಂಗಳೂರಿನ ಪರಮಪದ ತಂಡವು ನಡೆಸಿಕೊಡಲಿದೆ. ರಾಮಚಂದ್ರ ಹಡಪದ್, ಸ್ಪಶ ಆರ್.ಕೆ ಮತ್ತು ದಿವ್ಯಾ ಅವರು ಈ ತಂಡದಲ್ಲಿದ್ದು, ಹೆಸರಾಂತ ವೇದಿಕೆ ನಿರೂಪಕ ರಾಘವೇಂದ್ರ ಎನ್. ಕಾಂಚನ್ ಅವರು ನಿರೂಪಣೆ ಮಾಡಲಿದ್ದಾರೆ, ವಾದ್ಯ ವೃಂದದಲ್ಲಿ ದೀಪಕ್ ಜಯುಶೀಲನ್ ಮತ್ತು ತಂಡದವರು ಇದ್ದಾರೆ ಎಂದು ಶಶಿ ಎಸ್. ಮಂಗಳಗಾರ್ ತಿಳಿಸಿದರು.ಗೋಷ್ಠಿಯಲ್ಲಿ ಭರತ್ ಪ್ರಕಾಶ್,ಸಚಿನ್, ಮಂಜುನಾಥ್ ನವುಲೆ ಮತ್ತು ಅಮೋಘ್ ಇದ್ದರು.