ಶಿವಮೊಗ್ಗ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ಭಾರತದ ಹೆಮ್ಮೆಯ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ೭೭ನೇ ಜಯಂತಿ ಪ್ರಯುಕ್ತ ದಿನಾಂಕ: ೧೯-೦೮-೨೦೨೧ರ ಗುರುವಾರ ಬೆಳಿಗ್ಗೆ ೭ ಗಂಟೆಗೆ ‘ರನ್ ಫಾರ್ ರಾಜೀವ್’ ಮ್ಯಾರಥಾನ್ ಓಟದ ಸ್ಫರ್ಧೆ ಏರ್ಪಡಿಸಲಾಗಿದೆ. ಸ್ಫರ್ದೆಯು ೧೭ ವರ್ಷ ಮೇಲ್ಪಟ್ಟ ಎಲ್ಲರಿಗೂ ಓಪನ್ ಮ್ಯಾರಥಾನ್ ಹಾಗೂ ದಿನಾಂಕ: ೦೧-೦೮-೨೦೦೪ರ ನಂತರ ಜನಿಸಿದ ೧೭ ವರ್ಷದೊಳಗಿನ ವಯೋಮಾನದವರಿಗೆ ಎರಡು ವಿಭಾಗಗಳಲ್ಲಿ ನಡೆಯಲಿದೆ. ೧೭ ವರ್ಷ ಮೇಲ್ಪಟ್ಟವರ ಓಪನ್ ಮ್ಯಾರಥಾನ್ ಸ್ಪರ್ಧೆಯು ವಿಭಾಗದವರಿಗೆ ನೆಹರೂ ಕ್ರೀಡಾಂಗಣದಿAದ ೫ ಕಿ.ಮೀ. ದೂರ ನಡೆಯಲಿದ್ದು, ಪ್ರಥಮ ಬಹುಮಾನ ರೂ. ೨೫.೦೦೦, ದ್ವಿತೀಯ ಬಹುಮಾನ ರೂ. ೧೫.೦೦೦, ತೃತೀಯ ಬಹುಮಾನ ರೂ. ೧೦.೦೦೦, ನಾಲ್ಕನೇ ಬಹುಮಾನ ರೂ. ೫.೦೦೦, ಐದನೇ ಬಹುಮಾನ ರೂ. ೩.೦೦೦, ಸಮಾಧಾನಕರ ಬಹುಮಾನ ೧೦೦ ಜನಕ್ಕೆ ನೀಡಲಾಗುವುದು. ೧೭ ವರ್ಷದೊಳಗಿನವರಿಗೆ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದ್ದು, ನೆಹರೂ ಕ್ರೀಡಾಂಗಣದಿAದ ೩ ಕಿ.ಮೀ. ದೂರವಿರುತ್ತದೆ. ಪ್ರಥಮ ಬಹುಮಾನ: ರೂ. ೫.೦೦೦, ದ್ವಿತೀಯ ಬಹುಮಾನ: ರೂ. ೩.೦೦೦, ತೃತೀಯ ಬಹುಮಾನ: ರೂ. ೧.೦೦೦ ಇರುತ್ತದೆ.
ಆಸಕ್ತರು: ಮಾಹಿತಿಗಾಗಿ ಮತ್ತು ಹೆಸರು ನೊಂದಾಯಿಸಲು, ಮೊ: ೯೫೯೧೩೫೫೯೦೯, ೮೦೮೮೨೩೪೬೪೨, ೯೯೦೧೩೫೧೬೪೫ ಸಂಪರ್ಕಿಸಬಹುದು. ವಿಶೇಷ ಸೂಚನೆ: ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ದಿವಂಗತ ರಾಜೀವ್ ಗಾಂಧಿಯವರ ಭಾವಚಿತ್ರವುಳ್ಳಿ ಟೀಶರ್ಟ್ ನೀಡಲಾಗುವುದು. ಬಾಲಕ, ಬಾಲಕಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ‘ರನ್ ಫಾರ್ ರಾಜೀವ್’ ಮ್ಯಾರಥಾನ್ ಯಶಸ್ವಿಗೊಳಿಸುವಂತೆ ರಾಜ್ಯ ಯುವ ಕಾಂಗ್ರೆಸ್‌ನ ಕಾರ್ಯದರ್ಶಿ ಚೇತನ್ ಕೆ. ಕೋರಿದ್ದಾರೆ.