ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಡದಿಂದ ಬಸ್ಟಾಂಡ್ ಅಶೋಕ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಕಮಲ ಹಾಸನ್ ಪ್ರತಿ ಕೃತಿಗೆ ಬೆಂಕಿ ಇಟ್ಟಿ ಪ್ರತಿಭಟನೆ ನಡೆಸಿದರು.

ಕರವೇ ನಾರಾಯಣ ಗೌಡರ ಬಣ ಪ್ಲೆಕ್ಸ್ ಹಿಡಿದು ನಟ ಕಮಲ ಹಾಸನ್ ವಿರುದ್ಧ ಘೋಷಣೆ ಕೂಗಿದರು. ಕ್ಷಮೆ ಕೇಳಿದರೆ ಶಾಂತಿ ಒಳ್ಳೆಯದು.ಇಲ್ಲವಾದಲ್ಲಿ ಕ್ರಾಂತಿ ಎಂಬ ಘೋಷಣೆ ಕೂಗುವ ಮೂಲಕ ನಟ ಕಮಲ ಹಾಸನ್ ತನ್ನ ಹೇಳಿಕೆಯನ್ನ ವಾಪಾಸ್ ಪಡೆದು ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಕೇಬಲ್ ಮಂಜು, ಜಿಲ್ಲಾ ಉಪಾಧ್ಯಕ್ಷ ಶೈಲೇಶ್ ಕುಮಾರ್, ರಾಜ್ಯ ಸಹಕಾರ್ಯದರ್ಶಿ ಮಧು, ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಸೋಮ ಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮರೇಶ್ ಗೌಡ ಮತ್ತು ವಿಜಯ ಕುಮಾರ್, ಪದಾಧಿಕಾರಿಗಳು ತಾಲೂಕು ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *