ಕೊಪ್ಪ ಬಂಟರ ಭವನ ಅದ್ದೂರಿ ಶುಭಾರಂಭ…
KOPPA BUNTARA BAVANA GRAND OPENING…

ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೊಪ್ಪದಲ್ಲಿ ನೂತನವಾದ ಬಂಟರ ಭವನ ಅದ್ದೂರಿಯಾಗಿ ಲೋಕಾರ್ಪಣೆಗೊಂಡಿದೆ. ಮುಖ್ಯ ಅತಿಥಿಗಳಾಗಿ MRG ಗ್ರೂಪಿನ ಆಡಳಿತ ನಿರ್ದೇಶಕರಾದ ಶ್ರೀಯುತ ಪ್ರಕಾಶ್ ಶೆಟ್ಟಿ ರವರು ನೂತನ ಸಭಾ ಭವನ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಸಾವಿರಾರು ಜನ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು.ಅತಿಥಿಗಳಾಗಿ ಸದಾಶಿವ್ ಶೆಟ್ಟಿ ಕನ್ಯಾನ , ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ಶೆಟ್ಟಿ , ಕಾರ್ಯದರ್ಶಿಯಾದ ಪ್ರಸನ್ನ ಶೆಟ್ಟಿ ,ವಿಜಯ್ ಅಜಿಲ , ಶಾಸಕರಾದ ರಾಜೇಗೌಡರು , ಡಾ ಮೋಹನ ಆಳ್ವ, ತುಮಕನೆ ಸುಧಾಕರ್ ಶೆಟ್ಟಿ , ಅನಿಲ್ ಶೆಟ್ಟಿ , ಕಿಶೋರ್ ಕುಮಾರ್ ಹೆಗ್ಡೆ, ಸುಧಾಕರ್ ಶೆಟ್ಟಿ ಭದ್ರಾವತಿ , ಕೆ ವಿ ಸತೀಶ್ ಶೆಟ್ಟಿ , ಮೋಹನ್ ಶೆಟ್ಟಿ , ರಾಘವೇಂದ್ರ ಶೆಟ್ಟಿ , ರಾಜೇಶ್ ಶೆಟ್ಟಿ , ಸಂತೋಷ್ ಶೆಟ್ಟಿ , ಪ್ರಸನ್ನ ಶೆಟ್ಟಿ , ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ , ಶಾಸಕ ಗುರ್ಮೆ ಸುರೇಶ್ ಶೆಟ್ಟಿ , ಜೀವರಾಜ್ , ಗೋವಿಂದರಾಜು , ಸುಕುಮಾರ್ ಶೆಟ್ಟಿ ಆರ್ ಕೆ ಶೆಟ್ಟಿ , ಪ್ರಭಾಕರ್ ಶೆಟ್ಟಿ , ಅಶೋಕ್ ಶೆಟ್ಟಿ , ಪುರಂದರ್ ಶೆಟ್ಟಿ , ಉಪೇಂದ್ರ ಶೆಟ್ಟಿ , ವಿಜಯ್ ಹೆಗ್ಡೆ, ಸುಗ್ಗಿ ಸುಧಾಕರ್ ಶೆಟ್ಟಿ , ಅಶ್ವಿನಿ ಶೆಟ್ಟಿ , ಆನಂದ ಶೆಟ್ಟಿ , ಯಶೋಧ ನಾರಾಯಣಶೆಟ್ಟಿ , ಸಂಜೀವ ಶೆಟ್ಟಿ , ಪ್ರಕಾಶ ಶೆಟ್ಟಿ , ಸಾಗರ್ ಸುದೀರ್ ಶೆಟ್ಟಿ , ಗಿರಿಜಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಬಂಜಾರ ಪ್ರಕಾಶ್ ಶೆಟ್ಟಿ ರವರ ಕೊಪ್ಪ ತಾಲೂಕಿನಲ್ಲಿ ಸುಂದರವಾದ ಮತ್ತು ದೊಡ್ಡದಾದ ಭವನ ಶುಭಾರಂಭಗೊಂಡಿದೆ.ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ತಾಲೂಕುಗಳಲ್ಲೂ ಸಮಾಜದ ಸಹಕಾರ ಪಡೆದು ಬಂಟರ ಭವನ ನಿರ್ಮಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ರವರು ಮಾತನಾಡಿ ಬಹು ವರ್ಷಗಳ ಕನಸು ಇಂದು ನನಸಾಯಿತು. ಭವನಕ್ಕೆ ಸಹಕಾರ ನೀಡಿದ ಸಮಸ್ತ ಸಮಾಜ ಬಾಂಧವರು ಆತ್ಮೀಯರು ಹಿತೈಷಿಗಳಿಗೆ ನಾನೆಂದು ಚಿರಋಣಿ ಎಂದರು. ಕೊಪ್ಪ ತಾಲೂಕಿನ ಮತ್ತು ಸುತ್ತ ಮುತ್ತಲಿನ ಜನತೆ ಈ ಬಂಟರ ಭವನದ ಸದುಉಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.