ಶಿವಮೊಗ್ಗ ನಗರದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ರಾಜ್ಯದ ಬೇರೆ ಜಿಲ್ಲೆಗಳು ಸೇರಿದಂತೆ ವಿವಿಧೆಡೆಯಿಂದ ದೊಡ್ಡ ಸಂಖ್ಯೆಯ ಮುಸ್ಲಿಮರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಈದ್ ಮಿಲಾದ್ ಮೆರವಣಿಗೆ ನಗರದ ಗಾಂಧಿ ಬಜಾರ್ ನ ಸುನ್ನಿ ಜಾಮೀಯ ಮಸೀದಿಯಿಂದ ಮಧ್ಯಾಹ್ನ ಹೊರಟಿತು. ಪ್ರವಾದಿ ಪೈಗಂಬರ್ ಅವರ 1500 ನೇ ಜನ್ಮದಿನದ ಅಂಗವಾಗಿ ವಿಶೇಷವಾಗಿ ಈದ್ ಮಿಲಾದ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್‌ ವಿವಿಧ ವೇಷದಲ್ಲಿ ಮಕ್ಕಳು ಭಾಗವಹಿಸಿದ್ದು ಹೆಚ್ಚು ಗಮನ ಸೆಳೆಯಿತು. ಟಿಪ್ಪು ಸುಲ್ತಾನ್‌ ಚಿತ್ರವಿರುವ ಬೃಹತ್‌ ‍ಧ್ವಜಗಳು ಮೆರವಣಿಗೆಯಲ್ಲಿ ರಾರಾಜಿಸಿದವು ಕಂಡು ಬಂದಿತು.

ವಿವಿಧೆಡೆಯ ಸುಮಾರು 100ಕ್ಕೂ ಹೆಚ್ಚು ಡಿ.ಜೆ.ಗಳು ಮೆರವಣಿಗೆಯಲ್ಲಿ ಇದ್ದವು.ಪ್ರತಿ ಡಿಜೆ ಹಿಂದೆ ಯುವಕರ ಗುಂಪು ಕುಣಿದು ಕುಪ್ಪಳಿಸಿದರು.

ಈದ್ ಮಿಲಾದ್ ಮೆರವಣಿಗೆ ಗಾಂಧಿ ಬಜಾರ್ ಮಸೀದಿಯಿಂದ ಮೆರವಣಿಗೆ ಹೊರಟು ನಗರದ ವಿವಿಧ ರಸ್ತೆಗಳಲ್ಲಿ ಚಲಿಸಿ ಕೊನೆಗೆ ಅದೇ ಮಸೀದಿಯ ಮುಂದೆ ಒಂದು ಕೊನೆಗೊಂಡಿತು.

Leave a Reply

Your email address will not be published. Required fields are marked *