ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಸ್ವಪ್ನ ಪಿಎಸ್ಐ ಹಾಗೂ ಭಾರತಿ ಪಿಎಸ್ಐ ರವರು ನಗರದ ಜನನಿಬಿಡ ಪ್ರದೇಶವಾದ ಗಾಂಧಿಬಜಾರ್ ನಲ್ಲಿ ಪುಟ್ಬಾತ್ ವ್ಯಾಪಾರಿಗಳನ್ನು ತೆರವುಗೊಳಿಸಿ ಜೊತೆಗೆ ನಾಗರಿಕರಿಗೆ ಆಗುವ ಅನಾನುಕೂಲದ ಬಗ್ಗೆ ತಿಳುವಳಿಕೆ ಹೇಳಿದರು.
ಫುಟ್ಬಾತ್ ನಲ್ಲಿ ಇಟ್ಟುಕೊಂಡಿದ್ದ ಹಣ್ಣು ತರಕಾರಿಗಳನ್ನು ತೆರುವುಗಳಿಸಿ ನಂತರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.ಈ ಸಂದರ್ಭದಲ್ಲಿ ಸಂಚಾರಿ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.