ಹಾಂಕಾಂಗ್‌ನಲ್ಲಿರುವ ಸ್ನೇಹಿತನಿಂದ ತಿಳಿದುಬಂದ‘ಬಹಳ ಆಘಾತಕಾರಿ ಸಂದೇಶ’:

ಹಾಂಗ್ ಕಾಂಗ್ ನಲ್ಲಿ ಬಹಳಷ್ಟು ಜನರು ಅಲ್ಲಿರುವ ಭಾರತೀಯರೊಂದಿಗೆ ಹೆಚ್ಚು ಸ್ನೇಹ ಬೆಳೆಸುವುದಿಲ್ಲ ಮತ್ತು ಕೆಲವರು ಭಾರತೀಯರನ್ನು ದ್ವೇಷಿಸುತ್ತಾರೆ!ಆದರೆ ಯಾಕೆ?? ಇಲ್ಲಿಯ ಯಾವುದೇ ಸ್ಥಳೀಯ ಸ್ನೇಹಿತ ನನ್ನನ್ನು ತನ್ನ ಮನೆಗೆ ಆಹ್ವಾನಿಸಲಿಲ್ಲ ಮತ್ತು ನಮ್ಮ ಸ್ನೇಹ ಕೇವಲ ಔಪಚಾರಿಕವಾಗಿರುತ್ತಿತ್ತು. ನನ್ನ ಮತ್ತು ಅವರ ನಡುವೆ ಹಾರ್ದಿಕ ಸ್ನೇಹ ಬೆಳೆಸುವ ದಿಶೆಯಲ್ಲಿ ನನ್ನ ಪ್ರಯತ್ನ ಪ್ರಾಮಾಣಿಕವಾಗಿದ್ದರೂ ಕೂಡ ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿರಲಿಲ್ಲ. ಆಗಾಗ್ಗೆ ಅದರ ಬಗ್ಗೆ ನನಗೆ ಆಶ್ಚರ್ಯವಾಗುತ್ತಿತ್ತು. ಒಂದು ದಿನ ನಾನು ಸಾಹಸ ಮಾಡಿ ನನ್ನ ಸಹೋದ್ಯೋಗಿ ಸ್ನೇಹಿತನನ್ನು ಇದರ ಬಗ್ಗೆ ಕೇಳಿಯೇಬಿಟ್ಟೆ. ಮೊದಲು ಉತ್ತರಿಸಲು ಸ್ವಲ್ಪ ಹಿಂಜರಿಕೆ ಮಾಡಿದ ಆ ನನ್ನ ಹಾಂಗ್ ಕಾಂಗ್ ಸ್ನೇಹಿತ, ನಂತರ ನನ್ನ ಒತ್ತಾಯಕ್ಕೆ ಮಣಿದು ಆಡಿದ ಮಾತುಗಳು ಮತ್ತು ಆ ಗಂಭೀರ ವಿಷಯಗಳು ನನ್ನನ್ನು ಅಚ್ಚರಿಗೊಳಿಸಿತು, ಮಾತ್ರವಲ್ಲ ಅವನ ಅಭಿಪ್ರಾಯ ಕೇಳಿ ನನಗೆ ಬಹಳ ಬಹಳ ನಾಚಿಕೆಯಾಯಿತು. ಹಾಂಗ್ ಕಾಂಗ್ ಸ್ನೇಹಿತ ಕೇಳಿದ್ದು “200 ವರ್ಷಗಳ ಕಾಲ ಆಳ್ವಿಕೆ ನಡೆಸಲು ಭಾರತದಲ್ಲಿ ಎಷ್ಟು ಬ್ರಿಟಿಷರು ವಾಸಿಸುತ್ತಿದ್ದರು?” ನಾನೆಂದೆ “ಸುಮಾರು 10,000 ಬ್ರಿಟಿಷರಿರಬಹುದು”. “ಹಾಗಾದರೆ 32 ಕೋಟಿ ಭಾರತದ ಜನರನ್ನು ಹಿಂಸಿಸಿದವರು, ಮತ್ತು ಇಷ್ಟು ವರ್ಷಗಳ ಕಾಲ ಆಳಿದವರು ಯಾರು? ಅವರು ನಿಮ್ಮ ಸ್ವಂತ ಜನರೇ ತಾನೇ??” “ಜಲಿಯನ್ ವಾಲಭಾಗ್ ನಲ್ಲಿ ಜನರಲ್ ಡೈಯರ್ #ಫೈರ್ ಎಂದು ಹೇಳಿದಾಗ 1300 ನಿರಾಯುಧ ಜನರನ್ನು ಹೊಡೆದು ಕೊಂದವರು ಯಾರು?? ಅಲ್ಲಿ ಬ್ರಿಟಿಷ್ ಸೈನ್ಯವೇನೂ ಇರಲಿಲ್ಲವಲ್ಲ! ಒಬ್ಬನೇ ಒಬ್ಬ ಗನ್‌ಮ್ಯಾನ್ ಏಕೆ ಹಿಂದೆ ತಿರುಗಿ ಜನರಲ್ ಡೈಯರ್‌ನನ್ನು ಕೊಲ್ಲಲು ಸಾಧ್ಯವಾಗಲಿಲ್ಲ??” ಮುಂದುವರೆದು ಆತ ಕೇಳಿದ: “ಟರ್ಕಿ ಅಥವಾ ಮಧ್ಯ ಏಷ್ಯಾದಿಂದ ಎಷ್ಟು ಮೊಘಲರು ಮತ್ತು ಇತರರು ಭಾರತಕ್ಕೆ ಬಂದರು? ಹೇಗೆ ಅವರು ಸುಮಾರು 800 ವರ್ಷಗಳ ಕಾಲ ಭಾರತವನ್ನು ಲೂಟಿ ಮಾಡಿದರು ಮತ್ತು ಭಾರತವನ್ನು ಆಳಿದರು ಮತ್ತು ಭಾರತೀಯರನ್ನು ಗುಲಾಮರನ್ನಾಗಿ ಇಟ್ಟುಕೊಂಡರು???” “ಹೇಗೆ ನಿಮ್ಮ ಸ್ವಂತ ಜನರನ್ನು ತಮ್ಮ ಇಸ್ಲಾಮ್ ಮತಕ್ಕೆ ಮತಾಂತರಿಸಿದರು ಮತ್ತು ಅದೇ ಮತಾಂತರಿಗಳನ್ನು ನಿಮ್ಮ ವಿರುದ್ಧ ನಿಲ್ಲುವಂತೆ ಮಾಡಿದರು??” ಅವನ ಈ ಎಲ್ಲ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವೇ ಇಲ್ಲವಾಗಿತ್ತು, ಏನು ಹೇಳಬೇಕೆಂದೇ ತೋಚಲಿಲ್ಲ. ಅವನೇ ಹೇಳಿದ: “ಉತ್ತರ ಇಷ್ಟೇ.. ಹಣ ಮತ್ತು ಅಧಿಕಾರದ ದುರಾಸೆಯಲ್ಲಿ ಆ ವಿದೇಶಿಗರ ಅಮಿಷಕ್ಕೊಳಗಾಗಿ ನಿಮ್ಮವರು ತಮ್ಮ ಸಹೋದರರನ್ನೇ ಹಿಂಸಿಸಲು ಮತ್ತು ಲೂಟಿ ಮಾಡಲು ಶತ್ರುಗಳೊಂದಿಗೇ ಸೇರಿಕೊಂಡರಲ್ಲವೇ??
ಈಗ ಅವರು ವಿದೇಶಿಯರು ಎಂದು ಹೇಳಬೇಡಿ! ನಿಮ್ಮ ಸ್ವಂತ ಜನರೇ, ಭಾರತೀಯರೇ ವಿದೇಶಿಯರ ದಾಸರಾಗಿ, ಕೂಲಿಗಳಾಗಿ, ಸೈನಿಕರಾಗಿ ಶತಮಾನಗಳಿಂದ ಹಣ, ಸ್ವಾರ್ಥ ಮತ್ತು ಅಧಿಕಾರಕ್ಕಾಗಿ ತಮ್ಮ ಸ್ವಂತ ಸಹೋದರ ಸಹೋದರಿಯರನ್ನೇ ಕೊಂದು ಅತ್ಯಾಚಾರ ಮಾಡುತ್ತಿದ್ದಾರೆ, ನಿಜವಲ್ಲವೇ??” “ದೇಶದ್ರೋಹದಲ್ಲಿ ನಿಮ್ಮ ಜನರ ಪಾತ್ರದ ಬಗ್ಗೆ ನಮಗೆ ಬಲವಾದ ತಿರಸ್ಕಾರವಿದೆ. ನಮ್ಮಲ್ಲಿ ಅನೇಕರು ನಿಮ್ಮ ಸ್ವಾರ್ಥ, ದುರಾಸೆ ಮತ್ತು ದ್ರೋಹದ ಕಾರಣಕ್ಕಾಗಿ ನಿಮ್ಮನ್ನು ಬಲವಾಗಿ ದ್ವೇಷಿಸುತ್ತಾರೆ.”“ನಮ್ಮಲ್ಲಿ ಅಂತಹ ಜನರು ಇಲ್ಲವೇ ಇಲ್ಲ ಎಂದಲ್ಲ, ಆದರೆ ನಾವು ನಮ್ಮ ಮೇಲೆ ದಬ್ಬಾಳಿಕೆ ನಡೆಸುವವರೊಂದಿಗೆ ಸಹಕರಿಸುವುದಿಲ್ಲ. ನಮ್ಮ ದೇಶ ಅಥವಾ ಸಂಸ್ಕೃತಿಗೆ ವಿರುದ್ಧವಾಗಿ ಮಾತನಾಡುವ ಅಥವಾ ವರ್ತಿಸುವ ಜನರನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ ಎಂದು ನಾನು ನಿಮಗೆ ಪ್ರಮಾಣ ಮಾಡಿ ಹೇಳಬಲ್ಲೆ! ಕಮ್ಯುನಿಸ್ಟ್ ದೇಶವಾಗಿದ್ದರೂ ಚೀನಾದಲ್ಲಿ ಅಂತಹ ಜನರು ನಿಮಗೆ ಕಾಣುವುದಿಲ್ಲ! ನಾವು ಎಂದಿಗೂ ನಮ್ಮ ರಾಷ್ಟ್ರಕ್ಕೆ ದ್ರೋಹ ಮಾಡಲು ಸಾಧ್ಯವೇ ಇಲ್ಲ. ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ನಮಗೆ ಸದಾ ಹೆಮ್ಮೆ ಇದೆ. ನಾವು ಸಾಧ್ಯವಾದಷ್ಟು ಭಾರತೀಯರ ಬಗ್ಗೆ ಹೆದರುವುದಿಲ್ಲ ?? ಬ್ರಿಟಿಷರು ನಮ್ಮ ದೇಶ ಹಾಂಕಾಂಗ್‌ಗೆ ಬಂದಾಗ, ಒಬ್ಬ ವ್ಯಕ್ತಿಯೂ ಅವರ ಸೈನ್ಯಕ್ಕೆ ಸೇರಲಿಲ್ಲ ಏಕೆಂದರೆ ನಮ್ಮ ಪೂರ್ವಜರು ತಮ್ಮ ಜನರ ವಿರುದ್ಧ ಹೋರಾಡಲು ಸಿದ್ಧರಿರಲಿಲ್ಲ?? ಸ್ವಲ್ಪವೂ ಯೋಚಿಸದೇ ಸಂಪೂರ್ಣವಾಗಿ ಮಾರಾಟವಾಗಲು ಸಿದ್ಧರಾಗಿರುವ ಭಾರತೀಯರ ದ್ವಿಪಾತ್ರ ಇದು. ಇಂದಿಗೂ ಭಾರತದಲ್ಲಿ ಅದೇ ನಡೆಯುತ್ತಿದೆ! ಸ್ವತಂತ್ರಗೊಂಡ ಮೇಲೂ ಭಾರತೀಯರ ಪರಿಸ್ಥಿತಿ ಮತ್ತು ಮನಸ್ಸು ಬದಲಾಗಲೇ ಇಲ್ಲ. ಪ್ರಾಕೃತಿಕ, ಆಕ್ರಾಮಕ ಅಥವಾ ಇನ್ನಾವುದೇ ಸಮಸ್ಯೆಗಳಿರಲಿ ನೀವು ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗೆ ಎರಡನೇ ಸ್ಥಾನವನ್ನು ನೀಡುತ್ತೀರಿ ಮತ್ತು ನಿಮ್ಮ ಸ್ವಂತ ಲಾಭಕ್ಕಾಗಿ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಸೇರಲು ನಿಮಗೆ ಹಿಂಜರಿಕೆಯೇ ಇಲ್ಲ. ದೇಶದ ಸಂಕಷ್ಟದ ಸಮಯದಲ್ಲಿಯೂ ನಿಮ್ಮಲ್ಲಿ ಮೂಡುವ ಮೊದಲ ಭಾವನೆ ದೇಶ ನಾಶವಾಗಿ ಹೋದರೂ ‘ನಾನು ಮತ್ತು ನನ್ನ ಕುಟುಂಬ ಮೊದಲು ಉಳಿಯಬೇಕು!!’. ಎನ್ನುವುದು. ಎಲ್ಲಿಯವರೆಗೆ ನೀವು ಪ್ರಾಮಾಣಿಕರಾಗಿ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ನಾವು ನಿಮ್ಮನ್ನು ನಂಬುವ ಮಾತೇ ಇಲ್ಲ.” “ಹಾಂಗ್ ಕಾಂಗ್ ನ ಆ ಸ್ನೇಹಿತ ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ನನಗೆ ಅವರೇನೆಂದು ಮತ್ತು ನಾವೇನೆಂದು ಅರ್ಥವಾಗಿ ಹೋಗಿತ್ತು.”

ಎಂ, ಎಸ್ ಸುಗಂಧಿ ಪ್ರಜಾಶ್ರೀ ಸಂಪಾದಕರು, ಹೈಕೋರ್ಟ್ ವಕೀಲರು ಬೆಂಗಳೂರು.

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153