ಶಿವಮೊಗ್ಗ ನಗರದ ದುರ್ಗಿಗುಡಿಯ ಬೀದಿ ಬದಿ ತಿಂಡಿಗಾಡಿ ವ್ಯಾಪಾರಸ್ಥರು ಈ ಹಿಂದೆ ಫುಡ್ ಕೋರ್ಟ್ ಅದಾಗ ಅಂದಿನ ಪಟ್ಟಿಯಲ್ಲಿ ನಮ್ಮನ್ನ ಕೈ ಬಿಡಲಾಯಿತು‌. ಹಾಗ ಜಿಲ್ಲಾಧಿಕಾರಿಗಳಾದ ಪೋನ್ನುರಾಜ್ ರವರಿಗೆ ನಮಗೂ ಫುಡ್ ಕೋರ್ಟ್ ನಲ್ಲಿ ವ್ಯಾಪಾರ ಮಾಡಲು ವ್ಯವಸ್ಥೆ ಮಾಡಿಕೊಡಲು ಮನವಿ ಮಾಡಲಾಯಿತು. ಅವರು ವರ್ಗಾವಣೆ ಅದಮೇಲೆ ಆಯುಕ್ತರಿಗೆ ಹಾಗೂ ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡಿರುವೆವು ಈಗ ಸ್ಮಾರ್ಟ್ ಸಿಟಿ ಕಾಮಗಾರಿ ಆಡಿ ಎಲ್ಲಾ ಕಡೆ ಒಕ್ಕಲೆಬ್ಬಿಸುತ್ತಿರುವುದು ನೋಡುತ್ತಿರುವೆವು ಹಾಗಾಗಿ ನಮಗೂ ಕೂಡ ಫುಡ್ ಕೋರ್ಟ್ ನಲ್ಲಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿಕೊಡಲು ಬೀದಿ ಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಟಿವಿಸಿ ಸದಸ್ಯರಾದ ಚನ್ನವೀರಪ್ಪ ಗಾಮನಗಟ್ಟಿ ರವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಬೀದಿ ಬದಿ ವ್ಯಾಪಾರಸ್ಥರ ಪ್ರಮುಖರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153