ಶಿವಮೊಗ್ಗ ನಂದನ್
ಶಿವಮೊಗ್ಗದ ಹಿರಿಯ ಛಾಯಾಗ್ರಾಹಕ ರಲ್ಲಿ ಒಬ್ಬರಾದ ಶಿವಮೊಗ್ಗ ನಂದನ್ ಅವರು ದಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದು. ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಿವಮೊಗ್ಗದ ಪತ್ರಕರ್ತ ಛಾಯಾಗ್ರಾಹಕರಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿರುವ ಸರಳ ಸಜ್ಜನಿಕೆಯ ವ್ಯಕ್ತಿ. ಅಭೂತಪೂರ್ವಕ್ಷಣಗಳನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ಮಾಂತ್ರಿಕ, ಶಿವಮೊಗ್ಗದ ಅನುಭವಿ ಛಾಯಾಗ್ರಾಹಕರು

ಸ್ಪಂದನ ಚಂದ್ರು
ಇವರು ಪ್ರಸ್ತುತ ಶಿವಮೊಗ್ಗದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪತ್ರಿಕಾ ಛಾಯಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದು ಶಿವಮೊಗ್ಗದ ಪ್ರಮುಖ ದಿನಪತ್ರಿಕೆಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ನಿರ್ವಹಿಸಿದ್ದಾರೆ. ಇವರು ಸೆರೆಹಿಡಿದ “ಗ್ರಾಮೀಣ ಬದುಕಿನ” ಛಾಯಾಚಿತ್ರಗಳು ಕಣ್ಮನ ಸೆಳೆದಿವೆ. ಅಲ್ಲದೆ ಸುದ್ದಿ ಸ್ಪಂದನ ಹಾಗೂ ಸ್ಪಂದನ ಚಂದ್ರು ಎಂಬ ಹೆಸರಿನಿಂದ ಫೇಸ್ ಬುಕ್ ನಿಂದ ಪ್ರಕಟವಾಗುತ್ತಿರುವ ತಮ್ಮ ವಿಭಿನ್ನ ಶೈಲಿಯ ಛಾಯಾಗ್ರಹಣದಿಂದ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.

ಶಿವಮೊಗ್ಗ ನಾಗರಾಜ್
ಶಿವಮೊಗ್ಗ ನಾಗರಾಜ್ ಅವರು ಯುವ ಛಾಯಾಗ್ರಾಹಕರಾಗಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವವರು. ಪ್ರಸ್ತುತ ಪ್ರಜಾವಾಣಿ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದು ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಜೀವನಶೈಲಿಯ ವಾಸ್ತವ್ಯಗಳನ್ನು ಆಧರಿಸಿದ ಇವರ ಛಾಯಾಚಿತ್ರಗಳು ತೃಣ ಮಾತೃನನ್ನು ಕೂಡ ವಿಶ್ವ ಮಾನವನಾಗುವ ನೆಡೆಗೆ ಪ್ರೇರೇಪಿಸುವ ಶಕ್ತಿ ಹೊಂದಿದೆ.

ಪ್ರಜಾಶಕ್ತಿಯ ಕರೆಗೆ ಓಗೊಟ್ಟು ತಮ್ಮ ಅಮೂಲ್ಯ ಸಮಯವನ್ನು ಕೃಷ್ಣ ವೇಷ ಸ್ಪರ್ಧೆ ತೀರ್ಪಿಗಾಗಿ ಮೀಸಲಿಟ್ಟ ಈ ಮೂವರು ತೀರ್ಪುಗಾರರಿಗು ಟೀಮ್ ಪ್ರಜಾಶಕ್ತಿಯ ವತಿಯಿಂದ ಧನ್ಯವಾದಗಳು