ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮೂವತ್ತೇಳು ವರ್ಷಗಳ ಸುದೀರ್ಘ ಸೇವೆಯ ನಂತರ ಇಂದು ನಿವೃತ್ತರಾಗುತ್ತಿರುವ ಡಾ.ಎ.ಸತೀಶ್ ಕುಮಾರ್ ಶೆಟ್ಟಿ ಇವರಿಗೆ ಸಾರ್ಥಕ ಸೇವೆಗಾಗಿ ಹಾರ್ದಿಕ ಅಭಿನಂದನೆಗಳು.
ತಮ್ಮ ವೃತ್ತಿಯ ಜೊತೆಗೆ ಅನೇಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿ, ಜನಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಇವರ ವಿಶ್ರಾಂತ ಜೀವನವು ಆರೋಗ್ಯ, ಸುಖ, ಶಾಂತಿ ಮತ್ತು ನೆಮ್ಮದಿಗಳಿಂದ ಕೂಡಿರಲಿ ಎಂದು ಇವರ ಸಾವಿರಾರು ವಿದ್ಯಾರ್ಥಿಗಳ, ಸ್ನೇಹಿತರ ಮತ್ತು ಹಿತೈಷಿಗಳ ಪರವಾಗಿ ಶುಭಹಾರೈಕೆಗಳನ್ನು ಕೋರುತ್ತೇವೆ.

ಶುಭ ಕೋರುವವರು: ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘ

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ