ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯ ಕಲ್ಲುಗಂಗೂರು ಗ್ರಾಮದ ಈಶ್ವರ್ ಬಿನ್ ಸೇವ್ಯಾನಾಯ್ಕ ಇವರಿಗೆ ಸೇರಿದ ಜಮೀನಿನ ಮೆಕ್ಕೆಜೋಳದ ಮಧ್ಯದಲ್ಲಿ ಅಕ್ರಮವಾಗಿ ಸುಮಾರು 30 ಗಾಂಜಾ ಗಿಡಗಳನ್ನು ಬೆಳರದಿರುವುದನ್ನು ಪತ್ತೆಹಚ್ಚಿ ಸದರಿ ಕೃತ್ಯವು ಎನ್.ಡಿ .ಪಿ. ಎಸ್ ಕಾಯ್ದೆ 1985 ರ ಕಲಂ 8(ಸಿ) ರೀತ್ಯಾ ಉಲ್ಲಂಘನೆ ಹಾಗೂ ಇದೇ ಕಾಯ್ದೆಯ ಕಲಂ 20(b) 20 (ii) (A)ರೀತ್ಯಾ ಶಿಕ್ಷಾರ್ಹ ಅಪರಾಧವಾಗಿರುವ ಕಾರಣ ಮೊಕದ್ದಮೆಯನ್ನು ದಾಖಲಿಸಲಾಯಿತು. ಮುದ್ದೆಮಾಲನ್ನು ನಿಯಾಮಾನುಸಾರ ಜಪ್ತು ಪಡಿಸಿಕೊಂಡು, ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ