ಸಕ್ರೆಬೈಲಿನ ಆನೆ ಕ್ರಾಲ್ ಗೆ ನಟ ಪುನೀತ್ ರಾಜಕುಮಾರ್ ಭೇಟಿ ನೀಡಿದ್ದಾರೆ. ಶೂಟಿಂಗ್ ಗೆ ಗೋಸ್ಕರ ಪುನಿತ್ ರಾಜ್ ಕುಮಾರ್ ಶಿವಮೊಗ್ಗದ ಸಕ್ರಬೈಲಿಗೆ ಬಂದಿದ್ದಾರೆ. ಒಪನ್ ಜೀಪ್ ನಲ್ಲಿ ಬಂದ ನಟ ಆನೆಗಳನ್ನ ಮುದ್ದಾಡುವ ದೃಶ್ಯ ಸೆರೆ ಮಾಡಿದ್ದಾರೆ. ಕುಂತಿ ಹಾಗೂ ಧನುಷ್ ಆನೆಗೆ ಆಹಾರ ನೀಡುವ ದೃಶ್ಯಗಳು ಸೆರೆಯಾಗಿವೆ. ಅಭಿಮಾನಿಗಳು ಕ್ರಾಲ್ ಪ್ರವೇಶದ್ವಾರದಲ್ಲಿ ಮಾಧ್ಯಮ ಮತ್ತು ಅಭಿಮಾನಿಗಳನ್ನ ತಡೆಹಿಡಿಯಲಾಗಿದೆ. ಎಲ್ಲರಿಗೂ ಪ್ರವೇಶವನ್ನ ನಿರ್ಬಂಧಿಸಲಾಗಿದೆ. ಆದರೆ ಶೂಟಿಂಗ್ ವೇಳೆ ಅಪ್ಪು ಸಾರ್ ಎಂದು ಕೂಗಿ ಕರೆಯುವ ದೃಶ್ಯಗಳು ಲಭ್ಯವಾಗಿದೆ.

ನಟನ ದರ್ಶನಕ್ಕಾಗಿ ಅಭಿಮಾನಿಗಳು ಪಡರದಾಡುವಂತಾಗಿದೆ. ಪರಿಸರದ ಕಾಳಜಿ ಬಗ್ಗೆ ಡಾಕ್ಯುಮೆಂಟರಿಗಳಾಗಿವೆ. ಪುನೀತ್ ಇದಕ್ಕೆ ಉಚಿತವಾಗಿ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಸುಮಾರು 3 ಗಂಟೆಯ ವೇಳೆಗೆ ಕ್ರಾಲ್ ನ ಗೇಟ್ ಬಳಿ ಬಂದ ನಟ ಪುನೀತ್ ಖಾಸಗಿ ಶೂಟಿಂಗ್ ಗಾಗಿ ಬಂದಿದ್ದೇನೆ. ಕೊರೋನ ಹಿನ್ನಲೆಯಲ್ಲಿ ಮಾತನಾಡುವುದಿಲ್ಲವೆಂದು ಪುನೀತ್ ಸ್ಪಷ್ಟಪಡಿಸಿದ್ದಾರೆ. ನಂತರ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ