ಇಂದು ನಡೆದ ಪ್ರೇರಣಾ ಟ್ರಸ್ಟ್ ಹಾಗೂ ಸೇವಾ ಭಾರತಿ ಜಂಟಿ ಸುದ್ದಿಗೋಷ್ಠಿಯಲ್ಲಿ ಲೋಕಸಭಾ ಸದಸ್ಯರಾದ ಬಿವೈರಾಘವೇಂದ್ರ ಅವರು ಮಾತನಾಡಿ ಪ್ರೇರಣಾ ಟ್ರಸ್ಟ್ ವತಿಯಿಂದ ಸುಮಾರು 25000 ಫುಡ್ ಕಿಟ್ ಗಳನ್ನು ಲೋಕಸಭಾ ಕ್ಷೇತ್ರಾದ್ಯಂತ ಬೈಂದೂರು ಸೇರಿದಂತೆ ಅರ್ಹರಿಗೆ ವಿತರಣೆ ಮಾಡಲಾಗುವುದು. ವಿತರಣೆಗೆ ಈ ಕಾರ್ಯದಲ್ಲಿ ಸೇವಾಭಾರತಿ ಕೈಜೋಡಿಸಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಸೇವಾಭಾರತಿ ಪ್ರಮುಖರಾದ ಪಟ್ಟಾಭಿರಾಮರು 1ಲೋಕಸಭಾ ಕ್ಷೇತ್ರಾದ್ಯಂತ ಫುಡ್ ಕಿಟ್ ವಿತರಣೆ ಮಾಡುವುದು ಸುಲಭದ ಮಾತಲ್ಲ ಈ ಕಾರ್ಯವನ್ನು ಕೈಗೊಳ್ಳುತ್ತಿರುವ ಪ್ರೇರಣಾ ಟ್ರಸ್ಟ್ ಗೆ ಧನ್ಯವಾದಗಳನ್ನು ತಿಳಿಸಿದರು. ಫುಡ್ ಕಿಟ್ ವಿತರಣೆ ವೇಳಾಪಟ್ಟಿ ಕೆಳಗಿನಂತಿದೆ.

ಮೇ 30 ಶಿವಮೊಗ್ಗ
ಮೇ 31 ತೀರ್ಥಹಳ್ಳಿ
ಜೂನ್ 1 ಹೊಸನಗರ
ಜೂನ್ 1ಸಾಗರ
ಜೂನ್ 2ಹೊಳೆಹೊನ್ನೂರು ಹಾಗೂ ಶಿವಮೊಗ್ಗ
ಜೂನ್ 3ಸೊರಬ
ಜೂನ್ 4ಭದ್ರಾವತಿ
ಜೂನ್ 5ಶಿಕಾರಿಪುರ

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ