ಆಜಾದೀ ಕಾ ಅಮೃತಮಹೋತ್ಸವ ಇದರ ಅಂಗವಾಗಿ 20karnataka ಬೆಟಾಲಿಯನ್ NCC ಶಿವಮೊಗ್ಗ, ಇವರು ಈ ದಿನ ಅಂದರೆ ದಿನಾಂಕ 10-9-2021 ರ ಶನಿವಾರದಂದು ಬೆಳಿಗ್ಗೆ ಆರು ಮೂವತ್ತಕ್ಕೆ ನಗರದ ಐತಿಹಾಸಿಕ ಸ್ಥಳವಾದ ಶಿವಪ್ಪನಾಯಕ ಅರಮನೆಯಿಂದ ಕೋಟೆ ರಸ್ತೆಯ ಮಾರ್ಗವಾಗಿ NCC ಕಚೇರಿಯವರೆಗೆ ಫಿಟ್ ಇಂಡಿಯಾ ಫ್ರೀಡಂ ರನ್.2.0 ಆಯೋಜಿಸಿದ್ದರು. ಭಾರತ ಸರ್ಕಾರದ ನಿರ್ದೇಶನದ ಮೇರೆಗೆ ಆಯೋಜಿಸಲಾದ ಈ ಕಾರ್ಯಕ್ರಮವನ್ನು 20 ಕರ್ನಾಟಕ ಬೆಟಾಲಿಯನ್ NCC ಶಿವಮೊಗ್ಗ ಇದರ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಅರುಣ್ ಯಾದವ್ ಉದ್ಘಾಟಿಸಿ ಮಾತನಾಡುತ್ತಾ ದೈಹಿಕ ಚಟುವಟಿಕೆ ಹಾಗೂ ಫ್ರೀಡಂ ರನ್, ದೈಹಿಕ ಮತ್ತು ಮಾನಸಿಕ ಆರೋಗ್ಯದ ವೃದ್ಧಿಗಾಗಿ ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಎನ್ ಸಿಸಿ ಕೆಡೆಟ್ ಗಳನ್ನು ಪ್ರೋತ್ಸಾಹಿಸಿದರು. ಈ ಕಾರ್ಯಕ್ರಮದಲ್ಲಿ ಡಿವಿಎಸ್ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ NCC ಅಧಿಕಾರಿ ಲೆಫ್ಟಿನೆಂಟ್ ಆರ್ ಸುರೇಶ್ ,ಹಾಗೂ ಸಹ್ಯಾದ್ರಿ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ NCC ಅಧಿಕಾರಿ ಲೆಫ್ಟಿನೆಂಟ್ ಶಶಿರಾಜ್. ಯು. ಹಾಗೂ ಶಿವಮೊಗ್ಗ NCC ಕಚೇರಿಯ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲೆಯ ಎಲ್ಲ NCC ಯೂನಿಟ್ ಗಳಲ್ಲಿಯೂ ಸಹ ಆಯೋಜಿಸಲಾಗಿತ್ತು

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ