ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಮಲ್ಲಿಗೆನಹಳ್ಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ತೆರೆದಿದ್ದು ಇಂದು ಕೋವಿಡ್ ಕೇರ್ ಸೆಂಟರ್ ಗೆ ಗ್ರಾಮಾಂತರ ಶಾಸಕರಾದ ಶ್ರೀ ಕೆ.ಬಿ.ಅಶೋಕ ನಾಯ್ಕ ರವರು ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿ, ಹಣ್ಣುಗಳನ್ನು ವಿತರಿಸಿ ಕೋವಿಡ್ ಸೊಂಕಿತ ಬಂಧುಗಳ ಆರೋಗ್ಯ ವಿಚಾರಿಸಿ ಆತ್ಮಸೈರ್ಯ ತುಂಬಿದರು.

ಈ ಸಂದರ್ಭದಲ್ಲಿ ತಾಲೂಕು ದಂಢಾದಿಕಾರಿ ನಾಗರಾಜ್ , ಇ.ಒ. ಕಲ್ಲಪ್ಪ, ಟಿ.ಹೆಚ್.ಒ ಚಂದ್ರಶೇಖರ್ , ವೃತ್ತ ನಿರೀಕ್ಷಕರಾದ ಸಂಜೀವ್ ಕುಮಾರ್, ಹಿಂಧುಳಿದ ಕಲ್ಯಾಣ ಇಲಾಖೆಯ ಅಧಿಕಾರಿ ಕುಮಾರ್ ಉಪಸ್ಥಿತರಿದ್ದರು.