ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಜೆಸಿಐ ಸಪ್ತಾಹದ ಅಂಗವಾಗಿ ಲಾಲ್ ಬಹುದ್ದೂರ್ ಶಾಸ್ತ್ರೀ ಬಡಾವಣೆಯ ಪಾರ್ಕ್ ಸ್ವಚ್ಚತೆಯ ಕಾರ್ಯಕ್ರಮವನ್ನು ಪೌರಕಾರ್ಮಿಕರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳಿಯ ಪಾಲಿಕೆ ಸದಸ್ಯರಾಗಿರುವ ವಿಶ್ವಾಸ್ ರವರು ಉಪಸ್ಥಿತರಿದ್ದು ಜೆಸಿಐ ಭಾರತ ಏಕಕಾಲಕ್ಕೆ :ಸ್ವಚ್ಚತೆ ಅಭಿಯಾನ ಹಾಗೂ ಅರಿವು ಕಾರ್ಯಕ್ರಮ ಏರ್ಪಡಿಸಿರುವುದು ಶ್ಲಾಘನೀಯ, ಇಂತಹ ಸಂಸ್ಥೆಗಳು ನಾಗರೀಕ ಸಮುದಾಯಕ್ಕೆ ಒಂದು ಶಕ್ತಿ ಎಂದು ಅಭಿಪ್ರಾಯಿಸಿದರು ಅಲ್ಲದೆ ತಾನು ಓರ್ವ ಪಾಲಿಕೆ ಸದಸ್ಯನಾಗಿ ಇಲ್ಲಿ ಭಾಗವಹಿಸದೇ ಸಾಮಾನ್ಯ ಜೆಸಿಯಾಗಿ ಸ್ವಚ್ಚತೆಯಲ್ಲಿ ಅಳಿಲು ಸೇವೆ ಮಾಡಲು ಹೆಮ್ಮೆಯಿದೆ, ಹಾಗೂ ಮುಖ್ಯವಾಗಿ ಪೌರಕಾರ್ಮಿಕರ ನಿರಂತರ ಶ್ರಮ ಆರೋಗ್ಯಕರ ಸಮಾಜಕ್ಕೆ ಕೊಡುಗೆ ಎಂದು ಅವರಿಗೆ ಮನಪೂರ್ವಕವಾಗಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪೌರಕಾರ್ಮಿಕರ ಮುಖಂಡರಾದ ನಾಗರಾಜ್ ಹಾಗೂ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಅಧ್ಯಕ್ಷರಾದ ಜೆಸಿ.ಹೆಚ್ ಜಿ ಎಫ್ ಮೋಹನ್ ಕಲ್ಪತರು, ಐಪಿಪಿ, ಜೆಸಿ. ಗಾರಾ.ಶ್ರೀನಿವಾಸ್, ಕಾರ್ಯದರ್ಶಿ. ಜೆಸಿ.ಮಮತಾ ಶಿವಣ್ಣ, ಕಾರ್ಯಕ್ರಮದ ಪ್ರಾಜೆಕ್ಟ್ ಡೈರೆಕ್ಟರ್ ಜೆಸಿ. ಸ್ವಪ್ನ ಸಂತೋಸ್ ಗೌಡ, ಸಹಕಾರ್ಯದರ್ಶಿ ಜೆಸಿ ಚಿರಂಜೀವಿ ಬಾಬು, ವಲಯ ನಿರ್ದೇಶಕರಾದ ಜೆಸಿ ಶೋಭಾ ಸತೀಶ್, ಉಪಾಧ್ಯಕ್ಷರುಗಳಾದ ಜೆಸಿ. ದಿವ್ಯಾ ಪ್ರವೀಣ್, ಜೆಸಿ ಯಾಹ್ಯ ಎಂ.ಡಿ, ನಿರ್ದೇಶಕರಾದ ಜೆಸಿ. ರಾಘವೇಂದ್ರ ಕಾವಾಡ್ ರವರುಗಳು ಉಪಸ್ಥಿತರಿದ್ದರು. ಹಾಗೂ ಘಟಕದ ಎಲ್ಲಾ ಜೆಸಿ ಸದಸ್ಯರುಗಳು ಪೌರಕಾರ್ಮಿಕರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153