ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ತೀರ್ಥಹಳ್ಳಿ ಯಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರ ಸ್ವ ಗೃಹದಲ್ಲಿ ಜಿಲ್ಲಾ ಅಧ್ಯಕ್ಷ ರಘುವೀರ್ ಸಿಂಗ್ ರವರ ನೇತೃತ್ವದಲ್ಲಿ ಭೇಟಿ ಮಾಡಿ ಕೋವಿಡ್ 3 ನೇ ಅಲೆಯಲ್ಲಿ ಜನತೆ ಮಕ್ಕಳು ಭಯ ಬೀತರಾಗಿದ್ದು ಸರಕಾರ ಕೂಡ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು. ನಮ್ಮ ಸಂಘಟನೆಯಿಂದ ಅಭಿನಂದನೆಗಳು ಆದರೆ ಶಾಲೆಗಳು ಈಗಾಗಲೇ ಆರಂಭಿಸಿರುವುದರಿಂದ ಇನ್ನು ಹೆಚ್ಚಿನ ಮುಂಜಾಗ್ರತೆಯನ್ನು ಸರಕಾರ ಹಾಗೂ ತಾವುಗಳು ವಹಿಸಬೇಕು ಹಾಗೂ ಸೂಕ್ತವಾಗಿ ಕೋವಿಡ್ ಕಾರ್ಯ ನಿರ್ವಹಣೆಯಲ್ಲಿ ನಮ್ಮ ಸಂಘಟನೆ ಕೂಡ ತಮ್ಮ ಸರಕಾರದ ಜೊತೆಗೂಡಿ ಈ ಹಿಂದೆಯು ಕಾರ್ಯಕ್ಕೆ ಸ್ಪಂದನೆ ಮಾಡಿದ್ದು ಮುಂದೆ ಕೂಡ ನಮ್ಮ ಸಂಘಟನೆ ನಿಮ್ಮ ಕರೋನ ವಾರಿಯರ್ಸ್ ರವರ ಜೊತೆಗೆ ಇರುತ್ತದೆ ಎಂದು ಮನವಿ ಪತ್ರ ನೀಡಿದರು . ಮನವಿ ಸ್ವೀಕರಿಸಿ ಸಚಿವರು ಸಂಘಟನೆಗೆ ಹಾಗೂ ಯುವ ಸಂಸ್ಥಾಪಕ ಗುಣರಂಜನ್ ಶೆಟ್ಟಿ ಯವರಿಗೆ, ರಾಜ್ಯ ಅಧ್ಯಕ್ಷರಾದ ಚಂದ್ರಪ್ಪ ರವರಿಗೆ ಅಭಿನಂದನೆಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಮುಖಂಡರಾದ ವಿನೋದ್, ಪ್ರಮೋದ್, ಹಾಗೂ ತೀರ್ಥಹಳ್ಳಿಯ ಸಂಘಟನೆ ಮುಖಂಡರು ಹಾಜರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153