ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ 1942 ರಲ್ಲಿ ನಡೆದ ಈಸೂರು ಸ್ವಾತಂತ್ರ ದಂಗೆಯ ನಡೆದು ದಿನಾಂಕ 26/09/2021 ಕ್ಕೆ 80 ವರ್ಷಗಳಾಗಿದ್ದು ಹೋರಾಟದಲ್ಲಿ ಹುತಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲು ನಮಿಸಲು ಮತ್ತು ಜಾಗೃತಿ ಮೂಡಿಸಲು ಚೆಲುವ ರಂಗ ಸಂಸ್ಥೆಯ ಈ ಘಟನೆಯನ್ನು ನೆನಪಿಸುವ ಬೀದಿ ರಥರಂಗ ಮಾದರಿಯಲ್ಲಿ ಈ ಶೂರ ಸ್ವಾತಂತ್ರ ನಾಟಕ ತಯಾರಿ ಮಾಡಿದ್ದು ನಗರದ ಗೋಪಿ ವೃತ್ತದಲ್ಲಿ ಭಾನುವಾರ ಬೆಳಿಗ್ಗೆ 11: 30 ಕ್ಕೆ ಪ್ರದರ್ಶನ ಏರ್ಪಡಿಸಿದ್ದು 3 ಗಂಟೆಗೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮತ್ತು ಸಂಜೆ 5:30 ಕ್ಕೆ ಬಿಎಚ್ ರಸ್ತೆಯ ಕರ್ನಾಟಕ ಸಂಘದ ಬಳಿ ಪ್ರದರ್ಶನ ನೀಡಲಾಗಿದೆ ಮತ್ತು ದಿನಾಂಕ 27/09/2021 ರಂದು ಬೆಳಗ್ಗೆ 8 ಖಾಸಗಿ ಬಸ್ ನಿಲ್ದಾಣದಲ್ಲಿ ಮತ್ತು ಸಂಜೆ 5:30 ಕೆ ವಿದ್ಯಾನಗರದಲ್ಲಿ ಪ್ರದರ್ಶನ ನಾಗರಿಕರಿಗೆ ನಮ್ಮೂರಿನ ಈ ಸ್ವಾತಂತ್ರ್ಯ ಹೋರಾಟದ ನೆನಪನ್ನು ಮರುಕಳಿಸಲು ಪ್ರಯತ್ನಿಸುತ್ತದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ