ಶ್ರೀ ನರೇಂದ್ರ ಮೋದಿ ಯವರ 71 ನೇ ಜನ್ಮದಿನ ದ ಅಂಗವಾಗಿ ಸೆ 17 ರಿಂದ ಆ. 07 ರ ವರೆಗೆ 20 ದಿನ ವಿವಿಧ ಕಾರ್ಯಕ್ರಮಗಳನ್ನು ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಡಿಯಲ್ಲಿ ಬಿಜೆಪಿ ಶಿವಮೊಗ್ಗ ನಗರ ಸಮಿತಿಯಿಂದ ಅಯೋಜಿಸಲಾಗಿದ್ದು, ಅದರ ಭಾಗವಾಗಿ ದಿ.26:09:2021 ರ ಇಂದು ಬೆಳಿಗ್ಗೆ 9:30 ಕ್ಕೆ ನಗರದ ಬೊಮ್ಮನಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಉಚಿತ ಕಣ್ಣು ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ಶಿವಮೊಗ್ಗ ನಗರಾದ್ಯಕ್ಷರಾದ ಶ್ರೀ ಜಗದೀಶ್ ಎನ್ ಕೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷರಾದ ಹೆಚ್ ಸಿ ಮಾಲತೇಶ್, ನಗರ ಸಮಿತಿಯ ಸದಸ್ಯರಾದ ಮೋಹನ್ ಜಾಧವ್, ಪುರುಷೋತ್ತಮ್, ಚಂದ್ರಪ್ಪ, ಎಸ್.ಟಿ.ಮೋರ್ಚಾ ದ ನಗರಾದ್ಯಕ್ಷರಾದ ರಂಗೇಶ್, ನಗರ ಮಾಧ್ಯಮ ಸಹ ಸಂಚಾಲಕರಾದ ಮಂಜುನಾಥ್ ಎನ್, ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿಗಳಾದ ಉಮಾ ಮೇಡಂ, ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರಾದ ದೀಪ್ತಿ, ಹಾಗೂ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಸ್ಥಳೀಯ ಬಿಜೆಪಿ ಕಾರ್ಯಕರ್ತರುಗಳು, ನಿವಾಸಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ