ದಿನಾಂಕ: 26-09-2021 ರ ಸಾಯಂಕಾಲ 5 ಗಂಟೆಗೆ ಸರ್ಕಾರಿ ನೌಕರರ ಸಭಾಂಗಣ ಶಿವಮೊಗ್ಗದಲ್ಲಿ ಶ್ರೀ ಸಂತೋಷ ಅರಣ್ಯ ರಕ್ಷಕರು ಸಕ್ರೆಬೈಲ್ ವನ್ಯಜೀವಿ ವಲಯ ಮತ್ತು ಶ್ರೀ ಕೊಟ್ರೇಶ್ ರಕ್ಷಕರು ಹಣಗೇರಿ ವನ್ಯಜೀವಿ ವಲಯ ಇವರು ಬರೆದಿರುವ ಅರಣ್ಯ ರಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕ “ಗಂಧದ ಗುಡಿ ” ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಪ್ರದೀಪ್ ಹಾಲಭಾವಿ RFO ಸಕ್ರೆಬೈಲ್ ವನ್ಯಜೀವಿ ವಲಯ, ಶ್ರೀ ಜಗದೀಶ್ RFO ಹಣಗೆರೆ ವನ್ಯಜೀವಿ ವಲಯ, ಶ್ರೀ ರಂಗನಾಥ್ ಗೌರವ ಕಾರ್ಯದರ್ಶಿ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರ ನಿ. ಶಿವಮೊಗ್ಗ, ಶ್ರೀ ರಾಜು ಲಿಂಬು ಚವ್ಹಾಣ ಅಧ್ಯಕ್ಷರು ಅರಣ್ಯ ರಕ್ಷಕರ ಮತ್ತು ಅರಣ್ಯ ವೀಕ್ಷಕರ ಸಂಘ ಶಿವಮೊಗ್ಗ ವೃತ್ತ, ಶ್ರೀ ನರೇಂದ್ರ, ಮಂಜುನಾಥ್ DyRFO ಹಣಗೆರೆ ವನ್ಯಜೀವಿ ವಲಯ, ಶ್ರೀ ರಶೀದ್ ಬೇಗ ಅಧ್ಯಕ್ಷರು ಭದ್ರಾವತಿ ವಿಭಾಗ, ಶ್ರೀ ಅವಿನಾಶ್ ಅಧ್ಯಕ್ಷರು ಶಿವಮೊಗ್ಗ ವಿಭಾಗ ಇವರು ಉಪಸ್ಥಿತರಿದ್ದರು. ಮುಂಬರುವ ಅರಣ್ಯ ರಕ್ಷಕರ ನೇಮಕಾತಿ ಪರೀಕ್ಷೆಗೆ ಗಂಧದ ಗುಡಿ ಪುಸ್ತಕವು ತುಂಬಾ ಸಹಕಾರಿಯಾಗಲಿದೆ ಎಂದು ಪುಸ್ತಕ ಬಿಡುಗಡೆಗೊಳಿಸಿ ಶ್ರೀ ಪ್ರದೀಪ್ ಹಾಲಬಾವಿ ಇವರು ನುಡಿದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ