ಸಯ್ಯದ್ ಸಾಧಿಕ್, 38 ವರ್ಷ, ಇಲಿಯಾಸ್ ನಗರ, ಶಿವಮೊಗ್ಗ ಟೌನ್* ಈತನು ಆರೋಪಿಗೆ ಈ ಹಿಂದೆ ಕೈ ಸಾಲವಾಗಿ ಹಣವನ್ನು ನೀಡಿದ್ದು, ಆದರೆ ಆರೋಪಿಯು ಹಣ ವಾಪಾಸ್ ನೀಡದೆ ಒಂದು ವರ್ಷದಿಂದ ಸತಾಯಿಸುತ್ತಿರುತ್ತಾನೆ. ಹಣ ವಾಪಾಸ್ ಕೊಡಿ ಎಂದು ಒತ್ತಾಯ ಮಾಡಿದ್ದರಿಂದ ದಿನಾಂಕಃ-24-09-2021 ರಂದು ಸಂಜೆ ಹಣವನ್ನು ವಾಪಾಸ್ ನೀಡುತ್ತೇನೆಂದು ಕರೆಸಿಕೊಂಡು, ಆರೋಪಿತರು ತುಂಗಾನಗರ ಠಾಣಾ ವ್ಯಾಪ್ತಿಯ ಕಲ್ಲೂರು ಇಂಡಸ್ಟ್ರಿಯಲ್ ಏರಿಯಾ ಶಾರದಾ ಕಾಲೋನಿ ಚಾನೆಲ್ ಹತ್ತಿರ ಸಯ್ಯದ್ ಸಾಧಿಕ್ ನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುತ್ತಾರೆ ಈ ಬಗ್ಗೆ ಪ್ರಕರಣ ಸಂಖ್ಯೆ 308/2021 ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು, ದಿನಾಂಕಃ- 26-09-2021 ರಂದು ಪಿ.ಐ ತುಂಗಾನಗರ ಠಾಣೆ ಮತ್ತು ಸಿಬ್ಬಂದಿಗಳ ತಂಡವು ಪ್ರಕರಣಕ್ಕೆ ಸಂಬಂಧಿಸಿದ ಮೂರು ಜನ ಆರೋಪಿತರನ್ನು ಬಂಧಿಸಿ, ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ