ಯಡೇಹಳ್ಳಿ ಗ್ರಾ.ಪಂ ಸರಗುಂದ ಗ್ರಾಮದ ಸ್ಕಂದನ s/o ಬೋಜಪ್ಪ ಎಂಬ ಬಾಲಕನಿಗೆ ಕೆಲ ತಿಂಗಳ ಹಿಂದೆ ಹಾವು ಕಡಿದು ಕಾಲು ಕೊಳೆಯುತ್ತಿರುವ ಸ್ಥಿತಿಯಲ್ಲಿದ್ದು, ಸೂಕ್ತ ಚಿಕಿತ್ಸೆಗೆ ಹಣವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿರುವ ವಿಷಯ ತಿಳಿದು,

ದಿ: 30-09-2021 ಶಾಸಕರಾದ ಹಾಲಪ್ಪ ನವರು ಸ್ಕಂದನ್ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ವೈಯಕ್ತಿಕ ಧನ ಸಹಾಯ ನೀಡಿ, ಹೆಚ್ಚಿನ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದರು.

ಕುಟುಂಬಸ್ಥರಿಗೆ ನೀಡಿದ ಭರವಸೆಯಂತೆ ನಿನ್ನೆ (ಶುಕ್ರವಾರ) ಸ್ಕಂದನ್ ಮನೆಗೆ ಆಂಬುಲೆನ್ಸ್ ಕಳುಹಿಸಿ, ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆ ಅವಶ್ಯವಿದಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿ ಕೊಡುವ ಭರವಸೆ ನೀಡಿದ್ದಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ