02/10/21 ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಚನ್ನವೀರಪ್ಪ ಗಾಮನಗಟ್ಟಿ ರವರ, ಆದೇಶದಂತೆ ಶಿವಮೊಗ್ಗ ಜಿಲ್ಲಾದ್ಯಂತ ಸ್ವಚ್ಛತಾ ಸಪ್ತಾಹ ಆಂದೋಲನ ಕಾರ್ಯಕ್ರಮ ನಡೆಯುತ್ತಿದ್ದು. ಏಳನೇ ದಿನದ ಸ್ವಚ್ಛತಾ ಕಾರ್ಯವೂ ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯ ಖಾಸಗಿ ಬಸ್ ನಿಲ್ದಾಣ ಅಶೋಕ ವೃತ್ತದ ಕುಶಲಕರ್ಮಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧ್ಯಕ್ಷರು ಬಿ.ಹೆಚ್ ರಸ್ತೆ, ಅಶೋಕ ವೃತ್ತದಲ್ಲಿ ಸ್ವಚ್ಛತೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಡಾ| ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಶಿವಮೊಗ್ಗ ಜಿಲ್ಲಾ ಸಂಯೋಜಕರಾದ ಶ್ರೀ ಮಲ್ಲಿಕಾರ್ಜುನ ರವರು, ಬೀದಿ ಬದಿ ವ್ಯಾಪಾರಿಗಳಾದ ಪೆನ್ನೀರು ಸೇಲ್ವಂ, ಮಾರಪ್ಪ, ಪುಷ್ಪಾ, ಮಂಜುಳಾ, ಅಪ್ಪು ಸುಬ್ರಹ್ಮಣ್ಯ ಹಾಗೂ ಇತರರೂ ಶ್ರಮದಾನದಲ್ಲಿ ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ