ಕರೋನ ಮಹಾಮಾರಿ  ಸುಳಿವೆ ಸಿಗದಂತೆ ಓಡಿಸುವ ಪ್ರಯತ್ನ ಲಸಿಕೆ ನೀಡುವ ಕಾರ್ಯಕ್ರಮದ ಮೂಲಕ ಇಡೀ ದೇಶವೇ ನಡೆಯುತ್ತಿದೆ ಕರೋನ ವಿಶ್ವವನ್ನೇ ತಲ್ಲಣಗೊಳಿಸಿದೆ ಆದರೆ ಇದಕ್ಕೆ ಸೆಡ್ಡುಹೊಡೆದ ಏಕೈಕ ದೇಶವೆಂದರೆ ಅದು ಭಾರತ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ ನಾಯ್ಕ ಹೇಳಿದರು. ಭಾನುವಾರ ಹಾರನಹಳ್ಳಿಯಲ್ಲಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಮತ್ತು ಓಬಿಸಿ ಮೋರ್ಚಾ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಭಾಗವಹಿಸಿ ಮಾತನಾಡಿದರು ಮಹಾಮಾರಿ ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇದನ್ನು ನಿರ್ಮೂಲನೆ ಮಾಡಲು ಪ್ರತಿ ಕುಟುಂಬಕ್ಕೂ ಮನಸಿಗೆ ನೀಡಲಾಗುತ್ತಿದೆ ದೇಶದ ಪ್ರತಿಯೊಬ್ಬ ನಾಗರಿಕನ ಆರೋಗ್ಯ ಸುಧಾರಿಸಲಿ ಎಂಬುದು ಪ್ರಧಾನಿಯವರು ಆಶಯ ಎಂದರು.

ತಜ್ಞ ವೈದ್ಯರಾದ ಡಾ. ಕೌಶಿಕ್,  ಡಾ. ಪ್ರಕಾಶ್, ಡಾ. ಅನಿರುದ್ಧ್ ಉಡುಪ, ಡಾ. ಸೋನಾಲಿ ಮಂಜುನಾಥ, ಡಾ. ಜಯಚಂದ್ರ ರವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಮ್ಯಾಮ್ಕೋಸ್ ನಿರ್ದೇಶಕರಾದ ವಿರುಪಾಕ್ಷಪ್ಪ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಗಿರೀಶ್ ಗೋಪಾಲ್ ತಾಲೂಕು ರೈತ ಮೋರ್ಚಾ ಅಧ್ಯಕ್ಷರಾದ ಮಹೇಶ್ ಹಾಗೂ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ